ಗಣವೇಷಧಾರಿಗಳ ಪಥಸಂಚಲನಕ್ಕೆ ಕೋಟೆ ನಗರ ಸಜ್ಜು

ಹೊಸದಿಗಂತ ವರದಿ ಬಾಗಲಕೋಟೆ:

ರಾಷ್ಟ್ರೀಯ ಸ್ವಯಂ‌ ಸೇವಕ ಸಂಘದ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ನಗರದಲ್ಲಿ ಭಾನುವಾರ ನಡೆಯುವ ಆರ್‌ ಎಸ್.ಎಸ್. ಪಥ ಸಂಚಲನ ಸ್ವಾಗತಿಸಲು ಕೋಟೆ ನಗರ ಸಜ್ಜುಗೊಂಡಿದೆ. ಬಾಗಲಕೋಟೆ ನಗರದಲ್ಲಿ ಪಥಸಂಚಲನಕ್ಕೆ ಸ್ವಾಗತ ಕೋರಲು ಬ್ಯಾನರ್‌ ಕಟೌಟ್‌ಗಳು ರಾರಾಜಿಸುತ್ತಿದ್ದು, ನಗರ ಪೂರ್ತಿ ಕೇಸರಿಮಯವಾಗಿದೆ.

ಬಾಗಲಕೋಟೆ ನಗರದ ಪ್ರಮುಖ ವಾರ್ಡಗಳಲ್ಲಿ ಸಂಚರಿಸುವ ಗಣವೇಷಧಾರಿಗಳ ಪಥ ಸಂಚಲನ ಮಾರ್ಗದಲ್ಲಿ ಕೇಸರಿ ಕಾಗದಗಳ ತಳಿರು ತೋರಣದಿಂದ ಶೃಂಗರಿಸಲಾಗಿದೆ.

ಬಾಗಲಕೋಟೆ ನಗರದಲ್ಲಿ ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿರುವ ಪಥಸಂಚಲನಕ್ಕೆ ಭಾರೀ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ವಿವಿಧ ಕಡೆಯಿಂದ‌‌ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ಈಗಾಗಲೇ ನಿಯೋಜಿಸಲಾಗಿದೆ. ಪಥಸಂಚಲನ ವೀಕ್ಷಿಸಲು ಬಸವೇಶ್ವರ ವೃತ್ತ ಹಾಗೂ ವಿವಿಧ ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಜಿಲ್ಲೆ ಹಾಗೂ ನಗರದಿಂದ ಸಾವಿರಾರು ಸಂಖ್ಯೆಯಲ್ಲಿ ಪಥ ಸಂಚಲನ ವೀಕ್ಷಿಸಲು ಜನ ಬರುವುದು ವಿಶೇಷವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!