ಪುತ್ತೂರಿನಲ್ಲಿ ಗಮನ ಸೆಳೆದ ಆರೆಸ್ಸೆಸ್ ಪಥಸಂಚಲನ

ಹೊಸದಿಗಂತ ವರದಿ, ಪುತ್ತೂರು:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನಾ ದಿನವಾದ ವಿಜಯದಶಮಿಯಂದು ಅ.5ರ ಬೆಳಗ್ಗೆ ಪುತ್ತೂರು ಪೇಟೆಯಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಂದ ಘೋಷ್ ಸಹಿತ ಪಥಸಂಚಲನ ನಡೆಯಿತು.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಬೆಳಗ್ಗೆ 6.30ಕ್ಕೆ ಗಣವೇಷಧಾರಿ ಸ್ವಯಂ ಸೇವಕರು ಗದ್ದೆಯಿಂದ ಹೊರಟು ಆದರ್ಶ ಆಸ್ಪತ್ರೆ ರಸ್ತೆಯಾಗಿ ಮುಖ್ಯರಸ್ತೆಯಲ್ಲಿ ತೆರಳಿ ಗಾಂಧಿಕಟ್ಟೆಯ ಬಳಿಯಿಂದ ದೇವಸ್ಥಾನ ಬಳಿಗೆ ವಾಪಸಾಗಿ ಪಥಸಂಚಲನ ಸಮಾಪನಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!