`ಒಲವಿನ ನಿಲ್ದಾಣ’ಕ್ಕೆ ಬಂದ ಬಿಗ್ ಬಾಸ್ ವಿನ್ನರ್ ಕರಾವಳಿಯ ರೂಪೇಶ್ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :
 
ಕನ್ನಡ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಕರಾವಳಿಯ ರೂಪೇಶ್ ಶೆಟ್ಟಿ (Roopesh Shetty) ಮತ್ತೆ ಕಿರುತೆರೆ ಮೇಲೆ ಬರಲಿದ್ದಾರೆ.

ದೊಡ್ಮನೆಯಲ್ಲಿ ಹಾಡು, ಡ್ಯಾನ್ಸ್, ಮನರಂಜನೆ ಅಂತಾ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡ ರೂಪೇಶ್ ಗೆಲುವನ್ನ ವಿಜೃಂಭಿಸುವುದರಲ್ಲಿ ಬ್ಯುಸಿಯಾಗಿದ್ದರು. ಬಳಿಕ `ಮಂಕು ಭಾಯಿ ಫಾಕ್ಸಿ ರಾಣಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು.

ಇದೀಗ `ಒಲವಿನ ನಿಲ್ದಾಣ’ (Olavina Nildana) ಸೀರಿಯಲ್ ಮೂಲಕ ರೂಪೇಶ್ ಶೆಟ್ಟಿ ಕಿರುತೆರೆಗೆ ಮರಳಿದ್ದಾರೆ. ನಾಯಕಿ ತಾರಿಣಿ (Tharini) ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಅತಿಥಿಯಾಗಿ ಸಾಥ್ ನೀಡ್ತಿದ್ದಾರೆ.

ಧೀರಜ್ ಮತ್ತು ಸಿದ್ಧಾಂತ್ ಈ ಇಬ್ಬರಲ್ಲಿ ಯಾರನ್ನ ಮದುವೆಯಾಗಲಿ ಎಂದು ಗೊಂದಲದಲ್ಲಿರುವ ತಾರಿಣಿಗೆ ಪರಿಹಾರ ನೀಡಲು ಬರುತ್ತಿದ್ದಾರೆ. ಈ ಮೂಲಕ ಟಿವಿ ಪರದೆಯಲ್ಲಿ ಮತ್ತೆ ಮಿಂಚಲು ರೂಪೇಶ್ ಶೆಟ್ಟಿ ಸಜ್ಜಾಗಿದ್ದಾರೆ.

ಇನ್ನೂ ಈ ಕುರಿತ ಪ್ರೋಮೋ ಕೂಡ ರಿವೀಲ್ ಆಗಿದ್ದು, ಆರ್‌ಜೆ ಆಗಿ ರೂಪೇಶ್ ಕಾಣಿಸಿಕೊಂಡಿರುವ ತುಣುಕು ಸಖತ್ ಸದ್ದು ಮಾಡ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!