ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಪಡೆದ ಬಳಿಕ ಅಭಿಮಾನಿಗಳು, ನೆಟ್ಟಿಗರು ಮತ್ತು ಪ್ರೇಕ್ಷಕರು ಅವರು ಏನೇ ಹೇಳಿದರೂ, ಪೋಸ್ಟ್ ಮಾಡಿದರೂ ವೈರಲ್ ಮಾಡುತ್ತಿದ್ದಾರೆ. ಮದುವೆ, ಪ್ರೇಮದ ಬಗ್ಗೆ ತುಟಿ ಬಿಚ್ಚಿದ್ರೆ ಸಾಕು ಸಿನಿ ರಂಗದಲ್ಲಿ ಹಾಟ್ ಟಾಪಿಕ್ ಆಗುತ್ತದೆ. ಆ ಸಾಲಿಗೀಗ ಸಮಂತಾ ಮದುವೆ ಬಗ್ಗೆ ಮಾತನಾಡಿರುವ ವಿಡಿಯೋ ಕೂಡ ಸೇರಿದೆ.
ʻಕಾಫಿ ವಿತ್ ಕರಣ್ʼ ಬಾಲಿವುಡ್ನ ಪ್ರಸಿದ್ಧ ಶೋವೊಂದರಲ್ಲಿ ಸಮಂತಾ ಈ ಬಗ್ಗೆ ಹೇಳಿದ್ದಾರೆ. ಈ ಕಾರ್ಯಕ್ರಮದ ಏಳನೇ ಸೀಸನ್ ಜುಲೈ 7 ರಿಂದ ಹಾಟ್ ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದರೆ ಈ ಬಾರಿ ಸೌತ್ ಸೆಲೆಬ್ರಿಟಿಗಳನ್ನೂ ಈ ಶೋಗೆ ಕರೆತರಲಾಗಿದೆ. ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್, ವರುಣ್ ಧವನ್, ಅನನ್ಯಪಾಂಡೆ, ಜಾನ್ಹವಿ ಕಪೂರ್, ಸಾರಾ ಅಲಿ ಖಾನ್, ಅಕ್ಷಯ್ ಕುಮಾರ್, ಸಮಂತಾ. ಹೀಗೆ ಹಲವು ಸ್ಟಾರ್ ಸೆಲೆಬ್ರೆಟಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಈ ಪ್ರೋಮೋದಲ್ಲಿ ಸಮಂತಾ ಮಾಡಿರುವ ಕಾಮೆಂಟ್ ಈಗ ವೈರಲ್ ಆಗಿದೆ.
ಕರಣ್ ಜೋಹರ್ ಅವರನ್ನು ಉದ್ದೇಶಿಸಿ ಸಮಂತಾ, ಅನೇಕ ಮದುವೆಗಳು ಮುರಿದು ಬೀಳಲು ಮತ್ತು ಮದುವೆಗಳು ಸರಿಯಾಗಿ ನಡೆಯದಿರಲು ನೀನೇ ಕಾರಣ ಎಂಬ ಹೇಳಿಕೆ ಕೊಟ್ಟಿದ್ದಾರೆ. ನಾನೇನು ಮಾಡಿದೆ ಎಂದು ಕರಣ್ ಸಮಂತಾರನ್ನು ಪ್ರಶ್ನೆ ಮಾಡಿದ್ದಾರೆ. ‘ನೀನು ಮದುವೆಯಾದರೆ ಜೀವನ ‘ಕಬಿ ಖುಷಿ ಕಬಿ ಗಮ್’ ಸಿನಿಮಾದಂತೆ ಇರುತ್ತೆ, ಅಂತ ಹೇಳಿದ್ದೆ, ಆದರೆ, ನಿಜಜೀವನದಲ್ಲಿ ಕೆಜಿಎಫ್ ಸಿನಿಮಾ ರೀತಿ ಇರುತ್ತೆ ಎಂದು ವ್ಯಾಖ್ಯಾನಿಸಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಸಮಂತಾ ಮಾಡಿರುವ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.