ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯಕರ ಜೀವನವನ್ನು ನಡೆಸಲು, ಪ್ರತಿದಿನ ಹಣ್ಣುಗಳು ಮತ್ತು ತರಕಾರಿಗಳ ರಸವನ್ನು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಅದರೊಂದಿಗೆ, ಕರಿದ ಆಹಾರ ಪದಾರ್ಥಗಳು, ಗ್ಯಾಸ್ ತುಂಬಿದ ತಂಪು ಪಾನೀಯಗಳು ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಹೊಂದಲು ಇವು ಮುಖ್ಯವಾಗಿದೆ. ಖ್ಯಾತ ಪೋಷಕಾಂಶ ತಜ್ಞೆ ಅಂಜಲಿ ಮುಖರ್ಜಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಮೂರು ಮುಖ್ಯ ಜ್ಯೂಸ್ ಹಾಗೂ ಅವುಗಳ ಪ್ರಯೋಜನ ಇಲ್ಲಿದೆ.
ತುಳಸಿ ರಸವನ್ನು ದೈನಂದಿನ ಆಹಾರದಲ್ಲಿ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಳಸಿ ಆಸ್ತಮಾ, ಬ್ರಾಂಕೈಟಿಸ್, ಶೀತ ಕೆಮ್ಮು, ಸೈನಸ್ ಸಮಸ್ಯೆಗಳು, ಆಮ್ಲೀಯತೆ ಮತ್ತು ಜ್ವರದಂತಹ ವಿವಿಧ ಕಾಯಿಲೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕಪ್ಪು ತುಳಸಿ ಹಸಿರು ತುಳಸಿಗಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದಾಗಿದೆ.
ಕಲ್ಲಂಗಡಿ ಜ್ಯೂಸ್ನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
ಕ್ಯಾರೆಟ್ ಜ್ಯೂಸ್ ಕ್ಯಾಲ್ಸಿಯಂ, ವಿಟಮಿನ್ ಎ, ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಯಿಂದ ತುಂಬಿರುತ್ತದೆ.
ಕ್ಯಾರೆಟ್ ಜ್ಯೂಸ್ ದೇಹಕ್ಕೆ ಪೋಷಕಾಂಶಗಳ ಸರಿಯಾದ ಮಿಶ್ರಣವನ್ನು ಒದಗಿಸುತ್ತದೆ ಮತ್ತು ದೇಹವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.
ಕ್ಯಾರೆಟ್ ಜ್ಯೂಸ್ನ ಪ್ರಯೋಜನಗಳು ಹಲವಾರಿದೆ. ಇದು ನರಮಂಡಲ, ಚರ್ಮ, ಕೂದಲು ಮತ್ತು ರಕ್ತದ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಗೆಡ್ಡೆಯ ವಿರುದ್ಧ ಹೋರಾಡಲು ಮತ್ತು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಖ್ಯಾತ ಪೋಷಕಾಂಶ ತಜ್ಞೆ ಅಂಜಲಿ ಮುಖರ್ಜಿ.