ಹೊಸದಿಗಂತ ವರದಿ,ಕಲಬುರಗಿ:
ಇತ್ತೀಚೆಗೆ ನಿಧನರಾದ ಹಿರಿಯ ನ್ಯಾಯವಾದಿ ದಿ.ಸಾದತ್ ಹುಸೇನ್ ಉಸ್ತಾದ್ ಅವರ ನಿವಾಸಕ್ಕೆ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಡಾ,ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಅಲಮಪ್ರಭು ಪಾಟೀಲ, ತಿಪಣ್ಣಪ್ಪ ಕಮಕನೂರ, ಆಲಂಖಾನ್ ಸಾಬ್ ಇವರುಗಳು ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ ಹುಸೇನ್ ಉಸ್ತಾದ್, ಜಾಕಿರ್ ಹುಸೇನ್ ಉಸ್ತಾದ್ ಹಾಗೂ ಕುಟುಂಬದ ಸದಸ್ಯರಿಗೆ ಸಾತ್ವಾನ ಹೇಳಿದರು.ಅದರಂತೆ ಮಾಜಿ ಪ್ರಧಾನಿ ಹೆಚಾ.ಡಿ.ದೇವೆಗೌಡ ಅವರು ಸಹ ಭೇಟ ನೀಡಿ ಸಾಂತ್ವನ ಹೇಳಿದರು.
ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ ಹುಸೇನ್ ಉಸ್ತಾದ್, ಜಾಕಿರ್ ಹುಸೇನ್ ಉಸ್ತಾದ್ ಹಾಗೂ ಕುಟುಂಬದ ಸದಸ್ಯರಿಗೆ ಸಾತ್ವಾನ ಹೇಳಿದರು. ಸೂರ್ಯಕಾಂತ ಕೋರಳ್ಳಿ, ನ್ಯಾಯವಾದಿ ಮಜರ ಹುಸೇನ್, ಉಸ್ತಾದ್ ಗುತ್ತೇದಾರ, ಕೃಷ್ಣಾ ರೇಡಿ, ಸಾದಿತ್ ಕಲ್ಯಾಣಿ, ಅಲಿಮ್ ಇನಾಮದಾರ, ಮಲಿಕ್ ನಾಗನಳ್ಳಿ, ವಿಜಯಕುಮಾರ ಚಿಂಚನಸೂರ ಇದ್ದರು.