ಉಮೇಶ್ ಕತ್ತಿ ಅಗಲಿಕೆಯಿಂದ ನೋವುಂಟಾಗಿದೆ:ಜಗದೀಶ್‌ ಶೆಟ್ಟರ್‌ ಕಂಬನಿ

ಹೊಸದಿಗಂತ ವರದಿ ಹುಬ್ಬಳ್ಳಿ: 

ಅರಣ್ಯ ಸಚಿವ ಉಮೇಶ ಕತ್ತಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ. ಅರಣ್ಯ ಸಚಿವ ಉಮೇಶ ಕತ್ತಿ ನಮ್ಮ ಜೊತೆಗೆ ಆತ್ಮೀಯವಾದ ಸಂಬಂಧ ಹೊಂದಿದ್ದರು. ನೇರವಾಗಿ ಮಾತನಾಡುವಂತ ವ್ಯಕ್ತಿತ್ವ ಅವರದು. ಮನಸ್ಸಿಗೆ ಅನಿಸಿದ್ದನ್ನು, ಸ್ಪಷ್ಟವಾಗಿ ಹೇಳುವಂತ ವ್ಯಕ್ತಿ. ಉತ್ತರ ಕರ್ನಾಟಕ ಮತ್ತು ಬೆಳಗಾವಿ ಅಭಿವೃದ್ಧಿ ಬಗ್ಗೆ ಕನಸುಗಳನ್ನು ಕಂಡಿದ್ದರು ಎಂದು ತಿಳಿಸಿದರು.

ಉಮೇಶ ಕತ್ತಿ ಅಗಲಿಕೆ ರಾಜ್ಯಕ್ಕೆ ಬಹಳಷ್ಟು ನಷ್ಟವಾಗಿದೆ. ಅವರ ಸಾವು ನಮಗೆ ನೋವು ತಂದಿದೆ. ನೀರಾವರಿ ವಿಚಾರವಾಗಿ ಬಹಳಷ್ಟು ನಿಷ್ಠೂರವಾಗಿ ಮತನಾಡುತ್ತಿದ್ದರು. ಪಕ್ಷದ ಬಗ್ಗೆ ಸದಾ ಯೋಚನೆಯನ್ನ ಮಾಡುತ್ತಿದ್ದರು. ಸಕ್ಕರೆ ಕಾರ್ಖಾನೆ ಆರಂಭಿಸಿ ಸಾಕಷ್ಟು ಜನರಿಗೆ ಉದ್ಯೋಗ ನೀಡಿದ ಮಹಾನ್ ವ್ಯಕ್ತಿ. ದೇವರು ಅವರ ಆತ್ಮಕ್ಕೆ ಶಾಂತಿ‌ ನೀಡಲಿ ಎಂದು ಕಂಬನಿ ಮಿಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!