ಟಿ20 ಸರಣಿಗೆ ಸಜ್ಜಾಗುತ್ತಿದ್ದ ಟೀಮ್ ಇಂಡಿಯಾಕ್ಕೆ ಶಾಕ್: ಯುವ ಆಟಗಾರ ಔಟ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯೂಜಿಲ್ಯಾಂಡ್​ ವಿರುದ್ಧ ಏಕದಿನ ಸರಣಿ ಗೆದ್ದು ಖುಷಿಯಲ್ಲಿರುವ ಟೀಮ್ ಇಂಡಿಯಾ ಟಿ20 (INDvsNZ T20) ಸರಣಿಯ ಸಜ್ಜಾಗುತ್ತಿದ್ದು, ಇದರ ನಡುವೆ ತಂಡಕ್ಕೆ ಆಘಾತ ಎದುರಾಗಿದೆ.

ಆರಂಭಿಕ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ (Ruturaj Gaikwad) ಗಾಯದ ಸಮಸ್ಯೆಗೆ ಒಳಗಾಗಿದ್ದು ಟೂರ್ನಿಯಿಂದ ಹೊರಕ್ಕೆ ಬಿದಿದ್ದಾರೆ ವರದಿಯಾಗಿದೆ.

ಮಣಿಗಟ್ಟಿನ ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಗೆ ತೆರಳಲಿದ್ದು ಅವರಲ್ಲಿ ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.

ಋತುರಾಜ್​ ಗಾಯಕ್ವಾಡ್​ ಪದೇಪದೆ ಗಾಯಗೊಳ್ಳುತ್ತಿರುವುದು ಟೀಮ್​ ಇಂಡಿಯಾದ ಮ್ಯಾನೇಜ್ಮೆಂಟ್​ಗೆ ತಲೆಬಿಸಿಯ ವಿಚಾರವಾಗಿ ಪರಿಣಮಿಸಿದೆ. ಆದಾಗ್ಯೂ ಅವರು ಸುಧಾರಿಸಿಕೊಂಡು ವಾಪಸ್​ ಬರುವ ನಿರೀಕ್ಷೆಯಿದೆ. ಹೀಗಾಗಿ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಪರ್ಯಾಯ ಆಟಗಾರನನ್ನು ಆಯ್ಕೆ ಮಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!