ಹೊಸದಿಗಂತ ವರದಿ,ಮಂಗಳೂರು:
ಶುಭವರ್ಣ ಯಕ್ಷ ಸಂಪದ ಮರಕಡ ಮಂಗಳೂರು ಸಂಸ್ಥೆ ವತಿಯಿಂದ ನೀಡುವ ‘ಮರಕಡ ಕುಮೇರು ಮನೆ ಶ್ರೀಮತಿ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮರಣಾರ್ಥ ಶುಭವರ್ಣ ಪ್ರಶಸ್ತಿ-೨೦೨೨’ಕ್ಕೆ ಕಟೀಲು ಮೇಳದ ನಿವೃತ್ತ ಹಿರಿಯ ಬಣ್ಣದ ವೇಷಧಾರಿ ಸಂಪಾಜೆ ಸುಬ್ರಾಯ ಪಾಟಾಳಿ ಆಯ್ಕೆಯಾಗಿದ್ದಾರೆ.
ಶುಭವರ್ಣ ಸನ್ಮಾನ -೨೦೨೨ಕ್ಕೆ ಕಟೀಲು ಮೇಳದ ಕಲಾವಿದ ಕೊರಗಪ್ಪ ರೈ ಮಾಡಾವು ಆಯ್ಕೆಯಾಗಿದ್ದಾರೆ. ಮರಕಡ ಕಾರ್ತಿಕ್ ಕುಮಾರ್ ಸ್ಮರಣಾರ್ಥ ಶುಭವರ್ಣ ಪ್ರತಿಭಾ ಪುರಸ್ಕಾರ -೨೦೨೨ನ್ನು ಕಟೀಲು ಮೇಳದ ಯುವ ಕಲಾವಿದ ಗುರುತೇಜ ಶೆಟ್ಟಿ ಒಡಿಯೂರು ಅವರಿಗೆ ನೀಡಲಾಗುವುದು. ಪ್ರಶಸ್ತಿ ಮತ್ತು ಸನ್ಮಾನ ತಲಾ ೧೦೦೦೦ ರೂ. ನಗದು, ಪ್ರತಿಭಾ ಪುರಸ್ಕಾರ ೫೦೦೦ ರೂ.ನಗದು ಒಳಗೊಂಡಿದೆ. ನ.೨೦ರಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮರಕಡದಲ್ಲಿ ನಡೆಯುವ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶುಭವರ್ಣ ಯಕ್ಷ ಸಂಪದ ಸ್ಥಾಪಕ ಲಕ್ಷ್ಮಣ ಕುಮಾರ್ ಮರಕಡ ತಿಳಿಸಿದ್ದಾರೆ.