ಮತ್ತೆ ದೆಹಲಿಯತ್ತ ಸಿದ್ದು-ಡಿಕೆಶಿ, ಇನ್ನೂ ಮುಗಿದಿಲ್ಲ ಸ್ಥಾನಕ್ಕಾಗಿ ಪೈಪೋಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಐದು ದಿನಗಳಿಂದ ಸಿಎಂ ಸ್ಥಾನಕ್ಕೆ ಜಟಾಪಟಿ ನಡೆದಿದ್ದು, ಇದೀಗ ಸಿಎಂ ಯಾರು ಎನ್ನುವ ಘೋಷಣೆಯಾಗಿದೆ.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ಇಂದು ಮತ್ತೆ ದೆಹಲಿಗೆ ಮತ್ತೆ ತೆರಳಲಿದ್ದಾರೆ.

ಸಚಿವ ಸಂಪುಟ ರಚನೆ ಆಯ್ಕೆ ಕಸರತ್ತು ಆರಂಭವಾಗಿದೆ. ಡಿಕೆಶಿ ಹಾಗೂ ಸಿದ್ದು ಬೆಂಬಲಿಗರು ತಮಗೆ ಇಂಥದ್ದೇ ಸಚಿವ ಸ್ಥಾನ ಬೇಕು, ಉನ್ನತ ಸ್ಥಾನ ಬೇಕು, ಪ್ರಮುಖ ಹುದ್ದೆ ಬೇಕು ಎಂದು ಪೈಪೋಟಿಗೆ ಇಳಿದಿದ್ದು, ಇದನ್ನು ಬಗೆಹರಿಸುವುದು ಸುಲಭವಾಗಿರೋದಿಲ್ಲ.

ಹಾಗಾಗಿ ಹೈ ಜೊತೆ ಚರ್ಚೆ ನಡೆಸಿ ಯಾವ ಸಚಿವರಿಗೆ ಯಾವ ಖಾತೆ ಎನ್ನುವ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಶಾಸಕರಲ್ಲಿಯೂ ಸ್ಥಾನಕ್ಕಾಗಿ ಕಾದಾಟ ನಡೆಯಲಿದೆ, ಇದನ್ನು ಪರಿಹರಿಸುವ ಪ್ಲಾನ್ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!