ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ಹಿಮಪಾತ ಹೆಚ್ಚಾಗಿದ್ದು, ವಾಹನ ಹಾಗೂ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ದಟ್ಟ ಮಂಜಿನ ಕಾರಣದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ.
ಅಲ್ಲದೇ ಪ್ರವಾಸಿಗರಿಗರ ನೆಚ್ಚಿನ ತಾಣಗಳಾದ ಗುಲ್ಮರ್ಗ್, ಕುಲ್ಗಾಮ್ ಹಾಗೂ ಶೋಪಿಯಾನ್ ಹಿಮದಿಂದ ಆವೃತವಾಗಿದ್ದು, ಪ್ರವಾಸಿಗರಿಗೆ ನಿರಾಸೆಯಾಗಿದೆ. ಕಾಶ್ಮೀರದಲ್ಲಿ ತಾಪಮಾನ ಸುಧಾರಣೆಯಾಗಿದ್ದರೂ, ಮಂಜು ಕರಗಿಲ್ಲ.