ಸಂಸತ್ತಿನಲ್ಲಿ ಸ್ಮೃತಿ ಇರಾನಿಗೆ ‘Don’t Talk To Me’ ಎಂದ ಸೋನಿಯಾ ಗಾಂಧಿ: ಕಾರಣವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಅವ್ರನ್ನ ‘ರಾಷ್ಟ್ರಪತ್ನಿ’ ಎಂದು ಕರೆದಿದ್ದಕ್ಕೆ ಸಂಸತ್ತಿನಲ್ಲಿ ಇಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನುಈ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ಸಂಸದರೊಂದಿಗೆ ಮಾತನಾಡಲು ಸದನದಾದ್ಯಂತ ನಡೆದರು. ಆಗ ಸ್ಮೃತಿ ಇರಾನಿ ಮಧ್ಯಪ್ರವೇಶಿಸಿದಾಗ, ಸೋನಿಯಾ ಗಾಂಧಿ ‘ನನ್ನೊಂದಿಗೆ ಮಾತನಾಡಬೇಡಿ’ ಎಂದು ಹೇಳಿದರು.
ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ವಿರುದ್ಧ ಬಿಜೆಪಿ ಸಂಸದರ ಪ್ರತಿಭಟನೆಯಿಂದಾಗಿ ಲೋಕಸಭೆಯನ್ನು ಮುಂದೂಡಲಾಗಿತ್ತು. ಈ ವಿರಾಮದ ವೇಳೆ ತೀವ್ರ ಮಾತಿನ ಚಕಮಕಿ ನಡೆಯಿತು.
‘ಸೋನಿಯಾ ಗಾಂಧಿ, ಕ್ಷಮೆಯಾಚಿಸಿ’ ಎಂದು ಸ್ಮೃತಿ ಇರಾನಿ ಸದನದಲ್ಲಿ ಹೇಳಿದರು. ಈ ವೇಳೆ ಆಡಳಿತಾರೂಢ ಬಿಜೆಪಿ ಸದಸ್ಯರು ಫಲಕಗಳನ್ನು ಹಿಡಿದಿದ್ದರು.
ಸದನದ ಮಹಡಿಯನ್ನು ದಾಟಿ ಬಿಜೆಪಿ ಸಂಸದೆ ರಮಾ ದೇವಿ ಅವರ ಬಳಿ ಬಂದ ಸೋನಿಯಾ ಗಾಂಧಿ ಅವರು, ‘ಅಧೀರ್ ರಂಜನ್ ಚೌಧರಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಹೀಗಿದ್ದರೂ, ನನ್ನನ್ನು ಏಕೆ ಈ ವಿಚಾರದಲ್ಲಿ ಎಳೆಯಲಾಗುತ್ತಿದೆ?’ ಎಂದು ಪ್ರಶ್ನಿಸುತ್ತಿದ್ದರು.
ಇದೇ ಸಮಯಕ್ಕೆ ಮಧ್ಯೆ ಪ್ರವೇಶಿಸಿದ ಸ್ಮೃತಿ ಇರಾನಿ ಅವರು, ‘ಮೇಡಂ, ನಾನು ನಿಮಗೆ ಈ ಬಗ್ಗೆ ಹೇಳಬಹುದೇ? ಏಕೆಂದರೆ, ನಾನು ನಿಮ್ಮ ಹೆಸರನ್ನು ಪ್ರಸ್ತಾಪಿಸಿದ್ದೇನೆ’ ಎಂದು ಹೇಳಿದರು.
ಇದಕ್ಕೆ ಸೋನಿಯಾ ಗಾಂಧಿ ಅವರು,”ನನ್ನೊಂದಿಗೆ ಮಾತನಾಡಬೇಡಿ” ಎಂದು ಹೆಲ್ಲಿದ್ದು, ಇದಕ್ಕೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದಾಗ, ಪ್ರತಿಪಕ್ಷ ಸದಸ್ಯರು ಕೂಡ ಪ್ರತಿದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!