ಲೋಕಾಪುರ ಲೋಕೇಶ್ವರನಿಗೆ ಶ್ರೀ ಉಜ್ಜನೀಯ ಮಹಾಕಾಳೇಶ್ವರ ರೂಪಕ

ಹೊಸದಿಗಂತ ವರದಿ ಬಾಗಲಕೋಟೆ:

ಶ್ರಾವಣ ಮಾಸದ 3 ನೇ ಸೋಮವಾರ ಇಂದು ಮುಧೋಳ ತಾಲೂಕಿನ ಲೋಕಾಪುರದ ಶ್ರೀ ಲೋಕೇಶ್ವರನಿಗೆ ಶ್ರೀ ಉಜ್ಜನೀಯ ಮಹಾಕಾಳೇಶ್ವರ ವಿಶೇಷ ಪೂಜೆ ಸಲ್ಲಿಸಲಾಯಿತು.ಕಳೆದ ಹಲವಾರು ವರ್ಷಗಳಿಂದ ಲೋಕಾಪುರ ಲೋಕೇಶ್ವರ ನಿಗೆ ಶ್ರಾವಣ ಮಾಸದಲ್ಲಿ ಬುತ್ತಿ‌ಪೂಜೆ ಮಾಡಲಾಗುತ್ತದೆ.

ಈ ಅಪರೂಪದ ಶಿವನ ರೂಪಕಗಳ ಕಲಾವರಣವನ್ನು ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಕಲಾರ್ಚಕರಾದ ಕಂಟಯ್ಯ ಪೂಜಾರಿ ಅವರು ಪ್ರತಿ ಶ್ರಾವಣ ಮಾಸದಲ್ಲಿ ಲೋಕೇಶ್ವರನಿಗೆ ಮಾಡುತ್ತಾರೆ. ಲೋಕೇಶ್ವರನ ಅರ್ಚಕರಾದ ಗಣಾಚಾರಿ ಅವ್ರ ಆಹ್ವಾನದ ಮೇರೆಗೆ ಬಂದು ಲೋಕೇಶ್ವರನಿಗೆ ವಿಭಿನ್ನ ರೀತಿಯಲ್ಲಿ ಬುತ್ತಿ‌ಪೂಜೆ ಮಾಡುತ್ತಾರೆ. ಈ ವಿಶೇಷ ಬುತ್ತಿ‌ಪೂಜೆ ಯನ್ನು ಕಂಡು ಭಕ್ತಾದಿಗಳು ಭಕ್ತಿಭಾವಪರವಶರಾಗಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!