ಹೊಸದಿಗಂತ ವರದಿ, ಬೀದರ್:
ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನ ಅವರನ್ನು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕುರ, ಬೀದರ್ ನಗರ ಸಭೆಯ ನೂತನ ಸದಸ್ಯರಾಗಿ ನಾಮಕರಣಗೊಂಡಿರುವ ಭೂಷಣ ರತ್ನಾಕರ ಪಾಠಕ್, ರೋಷನ್ ರಾಜೇಂದ್ರ ವರ್ಮಾ, ಗಣೇಶ ವಿಶ್ವನಾಥ್ ಭೋಸ್ಲೆ, ನಿತೀನ್ ಸುಭಾಷ್ ಕರ್ಪೂರ, ಸುಭಾಷ ಮಡಿವಾಳ್ ಮತ್ತಿತರ ಗಣ್ಯರು, ಬಿಜೆಪಿ ಮುಖಂಡರು ಇದ್ದರು.