ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರದ ಬಿಸಿಲವಾಡಿಯಲ್ಲಿ ಕಲ್ಲು ಕ್ವಾರಿ ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಮಾರ್, ಶಿವರಾಜು ಮೃತರು. ಇನ್ನೊಬ್ಬ ಕಾರ್ಮಿಕನೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಕಾಗಲವಾಡಿಯ ಮೊಳೆ ಗ್ರಾಮದ ಕಾರ್ಮಿಕರು ಕ್ವಾರಿಗೆ ಕುಳಿ ಹೊಡೆಯುವಾಗ ಅಪಘಾತ ಸಂಭವಿಸಿದೆ. ಬಂಡೆಗಳ ರಾಶಿ ಮೈಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.