ಜಾತ್ರೆಯಲ್ಲಿ ನೆರೆದ ಜನರಿಗೆ ಕಚ್ಚಿದ ಬೀದಿ ನಾಯಿ: ಆರು ಮಂದಿ ಆಸ್ಪತ್ರೆಗೆ

ಹೊಸದಿಗಂತ ವರದಿ, ಸುಂಟಿಕೊಪ್ಪ:
ಜಾತ್ರೆಯಲ್ಲಿದ್ದವರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಎಎಸ್ಐ ಸೇರಿದಂತೆ ಆರು ಮಂದಿ ಗಾಯಗಿಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ಶ್ರೀ ಚಾಮುಂಡೇಶ್ವರಿ, ಮುತ್ತಪ್ಪ ಹಾಗೂ ಪರಿವಾರ ದೇವರುಗಳ ತೆರೆ ಮಹೋತ್ಸವ ನಡೆಯುತ್ತಿದ್ದು, ವಿವಿಧ ಗ್ರಾಮಗಳಿಂದ ನೂರಾರು ಮಂದಿ ಭಕ್ತಾದಿಗಳು ವೆಳ್ಳಾಟ ವಿಕ್ಷೀಸಲು ಆಗಮಿಸಿದ್ದರು.
ಈ ಸಂದರ್ಭ ಬೀದಿ ನಾಯಿಯೊಂದು, ಬಂದೋಬಸ್ತ್ ಕರ್ತವ್ಯದಲ್ಲಿದ್ದ ಎ.ಎಸ್.ಐ ಕಾವೇರಪ್ಪ ಸೇರಿದಂತೆ ಆರು ಮಂದಿಗೆ ಕಚ್ಚಿದೆ.
ನಾಯಿ ಕಡಿತಕ್ಕೆ ಒಳಗಾದ ಮಂದಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಇದು ಹುಚ್ಚು ನಾಯಿಯೋ, ಬೀದಿ ನಾಯಿಯೋ ಎಂಬ ಪ್ರಶ್ನೆ ಕಾಡುತ್ತಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!