ಕಲಾಪಕ್ಕೂ ಮೊದಲೇ ಟಿಡಿಪಿ ನಾಯಕರ ಹೈಡ್ರಾಮಾ, ಚಂದ್ರಬಾಬು ಬಂಧನ ವಿರೋಧಿಸಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿನಿಂದ ಐದು ದಿನಗಳ ಕಾಲ ಸಂಸತ್‌ ವಿಶೇಷ ಅಧಿವೇಶನಗಳು ನಡೆಯುತ್ತಿದ್ದು, ಕಲಾಪಕ್ಕೂ ಮೊದಲೇ ಸಂಸತ್‌ ಭವನದ ಮುಂದೆ ಟಿಡಿಪಿ ನಾಯಕರ ಹೈಡ್ರಾಮಾ ಶುರುವಾಗಿತ್ತು.

ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ಟಿಡಿಪಿ ಸಂಸದರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಬೇಕೇ ಬೇಕು ನ್ಯಾಯ ಬೇಕು. ಆಂಧ್ರಪ್ರದೇಶವನ್ನು ರಕ್ಷಿಸಿ ಎಂಬ ಘೋಷಣೆಗಳು ಕೇಳಿಬಂದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!