ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಶ್ರೀಲಂಕಾ ನಡುವಿನ ಕೊನೆಯ ಪಂದ್ಯ ಕೇರಳದ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ತಂಡದ ಆಟಗಾರರು ಶ್ರೀ ಅನಂತ ಪದ್ಮನಾಭ ದೇಗುಲಕ್ಕೆ ತೆರಳಿ ದೇವರ ದರುಶನ ಪಡೆದಿದ್ದಾರೆ.
ಸೂರ್ಯಕುಮಾರ್ ಯಾದವ್, ಜುಲ್ದೀಪ್ ಯಾದವ್, ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಲ್, ರಘು ಸೇರಿದಂತೆ ಇನ್ನಿತರ ಆಟಗಾರರು ದೇವಾಲಯಕ್ಕೆ ಭೇಟಿ ನೀಡಿದ್ದರು. ಕ್ರಿಕೆಟರ್ಸ್ ಭೇಟಿಗೆ ಅಭಿಮಾನಿಗಳು ಕಾದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.