ಜೆಡಿಎಸ್ ಗೆ ಕಣ್ಣೀರಧಾರೆ ಗ್ಯಾರಂಟಿ: ಶಾಸಕ ಪ್ರೀತಮ್‌ ಗೌಡ

ಹೊಸದಿಗಂತ ವರದಿ, ಮೈಸೂರು
ಜೆಡಿಎಸ್ ನವರು ಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಆಸೆಯಿಂದ ಜನತಾ ಜಲಧಾರೆ ಯಾತ್ರೆ ನಡೆಸಿದ್ದಾರೆ. ಆದರೆ ಅವರಿಗೆ ಕಣ್ಣೀರಧಾರೆ ಗ್ಯಾರಂಟಿ ಎಂದು ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿದರು.
ಗುರುವಾರ ಮೈಸೂರಿನಲ್ಲಿ ದಕ್ಷಿಣ ಪದವೀಧರ ರ ಕ್ಷೇತ್ರದ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಸೀಮಿತ ವಾದ ಪಕ್ಷ. ಹಾಗಾಗಿ ಆ ಪಕ್ಷವನ್ನು ಜನರು ಈಗಾಗಲೇ ತಿರಸ್ಕರಿಸಿದ್ದಾರೆ. ಹೀಗಿದ್ದರೂ ಮತ್ತೆ ಅಧಿಕಾರಕ್ಕೆ ಬರುವ ಆಸೆಯಿಂದ ಜಲಧಾರೆ ಯಾತ್ರೆ ನಡೆಸಿದ್ದಾರೆ. ಆದರೆ ಬರುವ ಚುನಾವಣೆಯಲ್ಲಿ ಆ ಪಕ್ಷದ ಗೆಲುವಿನ ಅಭ್ಯರ್ಥಿಗಳ ಸಂಖ್ಯೆ ಎರಡಂಕಿ ದಾಟಲ್ಲ. ಹಾಗಾಗಿ ಅವರ ಕುಟುಂಬಕ್ಕೆಂದು ನಡೆಸಿದ ಜಲಧಾರೆ ಮುಂದೆ ಕಣ್ಣೀರಧಾರೆಯಾಗಲಿದೆ ಎಂದು ಲೇವಡಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!