Wednesday, November 29, 2023

Latest Posts

ಚುನಾವಣಾ ಪ್ರಚಾರದ ವಾಹನದಿಂದ ಬಿದ್ದ ತೆಲಂಗಾಣ ಸಿಎಂ ಪುತ್ರ KTR

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರ, ಸಚಿವ ಕೆ.ಟಿ.ರಾಮರಾವ್ ಪ್ರಚಾರದ ವಾಹನದಿಂದ ಕೆಳಗೆ ಬಿದ್ದ ಘಟನೆ ನಡೆದಿದೆ.

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಆರ್ಮೂರು ಕ್ಷೇತ್ರದಲ್ಲಿ ಬಿಆರ್ ಎಸ್ ಅಭ್ಯರ್ಥಿ ಜೀವನ್ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆ ಮೂಲಕ ವಾಹನದಲ್ಲಿ ಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದೆ.

ಜೀವನ್ ರೆಡ್ಡಿ ಪರ ಸಚಿವ ಕೆ.ಟಿ.ರಾಮರಾವ್ ಪ್ರಚಾರ ನಡೆಸುತ್ತಾ ಮೆರವಣಿಗೆ ವಾಹನದಲ್ಲಿ ನಿಂತು ಸಾಗುತ್ತಿದ್ದರು. ಈ ವೇಳೆ ಪ್ರಚಾರ ವಾಹನ ಚಾಲಕ ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ವಾಹನದ ಮೇಲಿದ್ದ ಸಚಿವರು, ಜೀವನ್ ರೆಡ್ಡಿ ಹಾಗೂ ಇನ್ನಿತರರು ಮುಗ್ಗರಿಸಿ ಬಿದ್ದಿದ್ದಾರೆ. ಸಚಿವರು ಸಾವರಿಸಿಕೊಂಡು ಮೇಲೆದ್ದಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ.ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!