ಕಾಶ್ಮೀರಿ ಪಂಡಿತರಿಗೆ ಉಗ್ರರಿಂದ ಬೆದರಿಕೆ ಪತ್ರ: ತೊರೆಯಿರಿ ಇಲ್ಲವೇ ಸಾಯಿರಿ ಎಂದ ಭಯೋತ್ಪಾದಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಮ್ಮುವಿನ ಪುಲ್ವಾಮಾ ಜಿಲ್ಲೆಯಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹವಾಲ್ ಟ್ರಾನ್ಸಿಟ್ ವಸತಿಗೃಹದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಎಂಬ ಭಯೋತ್ಪಾದಕ ಸಂಘಟನೆ ಬೆದರಿಕೆ ಹಾಕಿದೆ.

ನಿರಾಶ್ರಿತರಾಗಿ ಬೇರೆ ವಸತಿ ಪ್ರದೇಶದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ಗುಂಪಿನ ಅಧ್ಯಕ್ಷರಿಗೆ ಹೆಸರಿಗೆ ಬರೆದಿರುವ ಪತ್ರದಲ್ಲಿ “ಎಲ್ಲಾ ಪಂಡಿತರು ಮತ್ತು ಆರ್‌ಎಸ್‌ಎಸ್ ಏಜೆಂಟರು ಜಾಗವನ್ನು ತೊರೆಯಿರಿ ಇಲ್ಲವೇ ಸಾವನ್ನು ಎದುರಿಸಿ” ಎಂದು ಹೇಳಿದೆ. ಅಲ್ಲದೇ “ಇಸ್ರೇಲ್‌ ಮಾದರಿಯಲ್ಲಿ ಕಾಶ್ಮೀರಿ ಮುಸ್ಲೀಮರನ್ನು ಕೊಲ್ಲಲು ಬಯಸುವ ಕಾಸ್ಮೀರೀ ಪಂಡಿತರಿಗೆ ಇಲ್ಲಿ ಜಾಗವಿಲ್ಲ. ನಿಮ್ಮ ಭದ್ರತೆಯನ್ನು ಮೂರುಪಟ್ಟು ಹೆಚ್ಚಿಸಿಕೊಳ್ಳಿ ಇಲ್ಲದಿದ್ದರೆ ನೀವು ಸಾಯುವಿರಿ” ಎಂದು ಬೆದರಿಕೆ ಹಾಕಿದೆ.

ಬದ್ಗಾಮ್‌ ಜಿಲ್ಲೆಯಲ್ಲಿ ರಾಹುಲ್‌ ಭಟ್‌ ಕೊಲೆಯ ವಿರುದ್ಧ ಹಲವಾರು ಕಾಶ್ಮೀರಿ ಪಂಡಿತರು ಪರ್ತಿಭಟನೆ ನಡೆಸಿ ಲೆ.ಗವರ್ನರ್‌ ಅವರಿಗೆ ಪತ್ರ ಬರೆದಿದ್ದರು. ಕಾಸ್ಮೀರದ ಲೇ.ಗವರ್ನರ್‌ ಮನೋಜ್‌ ಸಿನ್ಹಾ ಈ ಕುರಿತು ವಿಶೇಷ ತನಿಖಾ ತಂಡವೊಂದನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು. ಈ ಘಟನೆಗಳ ಬೆನ್ನಲ್ಲೇ ಬೆದರಿಕೆ ಪತ್ರ ಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!