ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ಗಿಂದು ವಿಮೋಚನಾ ದಿನ. ಈ ದಿನದ ಪ್ರಯುಕ್ತ ತೆಲಂಗಾಣ ರಾಜಧಾನಿ ಹೈದರಾಬಾದ್ನ ಪರೇಡ್ ಗ್ರೌಂಡ್ನಲ್ಲಿ ‘ಮುಕ್ತಿ ದಿವಸ್’ ಎಂಬ ಹೆಸರಿನಲ್ಲಿ ವಿಮೋಚನಾ ದಿನಾಚರಣೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿ, ಇದು ಅಚಲ ದೇಶಪ್ರೇಮಕ್ಕೆ ಸಾಕ್ಷಿ ಎಂದು ಜನರಿಗೆ ಶುಭ ಕೋರಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು “ಹೈದರಾಬಾದ್ನ ಎಲ್ಲಾ ಜನರಿಗೆ ಹೈದರಾಬಾದ್ ವಿಮೋಚನಾ ದಿನದ ಶುಭಾಶಯಗಳು. ಈ ದಿನ ರಾಜ್ಯ ಜನರ ಅಚಲ ದೇಶಪ್ರೇಮ ಮತ್ತು ನಿಜಾಮನ ದುಷ್ಟ ಆಡಳಿತ, ದಬ್ಬಾಳಿಕೆಯಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಜನರ ನಿರಂತರ ಹೋರಾಟಕ್ಕೆ ಸಾಕ್ಷಿಯಾಗಿದೆ. ಹೋರಾಟದಲ್ಲಿ ಮಡಿದ ಎಲ್ಲಾ ವೀರರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ” ಎಂದು ಹೇಳಿದ್ದಾರೆ.
ಹೈದರಾಬಾದ್ ನಿಜಾಮ ಸಂಸ್ಥಾನದ ಅರಸ ಭಾರತದ ಒಕ್ಕೂಟ ಸೇರಲು ಸಮ್ಮತಿಸದಿದ್ದಾಗ ಮತ್ತೊಂದು ಮಹಾ ಚಳುವಳಿಯೇ ನಡೆಸಬೇಕಾಯಿತು. ಸುಮಾರು ಹದಿಮೂರು ತಿಂಗಳುಗಳ ಬಳಿಕ ಅಂದರೆ, 1948 ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ಬಂದಿತು.