ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಲಿಯಾಯ್ತು: ಕೋಪದಲ್ಲಿ ಮಗುವನ್ನು ಮೊಸಳೆ ಬಾಯಿಗೆ ಹಾಕಿದ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತಿ-ಪತ್ನಿಯರ ನಡುವಿನ ಜಗಳದಿಂದ ಕೂಸು ಬಡವಾಯ್ತು ಎಂದು ನೀವು ಕೇಳೇ ಇರ್ತೀರಾ ಆದರೆ, ಇಲ್ಲೊಂದು ಪ್ರಕರಣದಲ್ಲಿ ಮಾತ್ರ ಆ ಕೂಸು ಅಮಾನವೀಯ ಮತ್ತು ಆಘಾತಕಾರಿಯಾಗಿ ಮೃತಪಟ್ಟಿದೆ. ಗಂಡನೊಂದಿಗಿನ ಜಗಳದಿಂದ ಹೆಂಡತಿ ತಾನು ಹೆತ್ತ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪತಿ ರವಿಕುಮಾರ್ ಜೊತೆ ಜಗಳವಾಡಿದ ಸಾವಿತ್ರಿ, ಕೋಪದಲ್ಲಿ ತನ್ನ ಮಗುವನ್ನು ಮೊಸಳೆ ತುಂಬಿದ ಕಾಲುವೆಗೆ ಎಸೆದಿದ್ದು, ನಂತರ ಪಶ್ಚಾತ್ತಾಪದಿಂದ ಘಟನೆ ಬಗ್ಗೆ ಮಾತನಾಡಿದ್ದಾಳೆ. ಆರು ವರ್ಷದ ವಿನೋದ್ ಎಂಬ ಬಾಲಕ ಮೊಸಳೆ ಬಾಯಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಮುಳುಗು ತಜ್ಞರ ಶೋಧ ಕಾರ್ಯ ಮುಂದುವರೆದಿದ್ದು, ಅಂತಿಮವಾಗಿ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಮಗುವಿನ ಬಲಗೈಯನ್ನು ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!