ಬಸ್ ನಿಲ್ದಾಣದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಸ್‌ ಚಾಲಕ

ಹೊಸದಿಗಂತ ವರದಿ, ಕಲಬುರಗಿ
ಮುಖಕ್ಕೆ ಮುಸುಕು ಹಾಕಿಕೊಂಡು ತಂತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಚಾಲಕ ಕಂ. ನಿರ್ವಾಹಕನ ಶವ ಸೇಡಂ ಬಸ್ ಘಟಕದಲ್ಲಿ ಪತ್ತೆಯಾಗಿದೆ.
ಭೀಮಾಶಂಕರ (45) ಮೃತಪಟ್ಟ ವ್ಯಕ್ತಿ. ಜಿಲ್ಲೆಯ ಅಫಜಲಪುರ ತಾಲೂಕಿನ ಗುಡೂರ ಗ್ರಾಮದ ಭೀಮಾಶಂಕರ ಈ ಮುಂಚೆ ಚಿಂಚೋಳಿ ಡಿಪೋದಲ್ಲಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಸೇಡಂ ಘಟಕಕ್ಕೆ ವರ್ಗಾವಣೆಯಾಗಿ ಬಂದಿದ್ದರು.
ಸೇಡಂ ಬಸ್ ಘಟಕದಲ್ಲಿ ತಲೆ -ಮುಖಕ್ಕೆ ಟವೆಲ್‌ನಿಂದ ಕವರ್ ಮಾಡಿಕೊಂಡು ಕೊರಳಿಗೆ ತಂತಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಮೃತ ಭೀಮಾಶಂಕರಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಸಾವಿನ ವಿಷಯ ಕೇಳಿದ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಸ್ಥಳಕ್ಕೆ ಸಿಪಿಐ ಆನಂದರಾವ್, ಪಿಎಸ್ಐ ಸೋಮಲಿಂಗ ಒಡೆಯರ್ ಭೇಟಿ‌ ನೀಡಿ ಪರೀಶಿಲನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವ ಹಸ್ತಾಂತರ ಮಾಡಲಾಗುವದು.
ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!