ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಂಧ್ಯಾಚಲ ಕಡೆಗೆ ಹೋಗುತ್ತಿದ್ದ ಟವೇರಾ ಕಾರು ಹಾಂಡಿಯಾ ಬಳಿ ಹೆದ್ದಾರಿಯಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 5 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಮೃತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 6.40 ಸುಮಾರಿಗೆ ಹೊತ್ತಿಗೆ, ವಾರಣಾಸಿ ಹೆದ್ದಾರಿಯ ಹ್ಯಾಂಡಿಯಾ ಟೋಲ್ ಪ್ಲಾಜಾ ಬಳಿ ಹತ್ತು ಜನರಿದ್ದ ಟವೇರಾ ಕಾರು ಅಪಘಾತಕ್ಕೀಡಾಗಿದೆ. ಎಲ್ಲರೂ ಸರೈ ಲಾಲ್ ಗ್ರಾಮದಿಂದ ವಿಂಧ್ಯಾಚಲಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ಬಳಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಕಾರು ಹೊಡೆದಿದೆ. ಈ ಅಪಘಾತದಲ್ಲಿ ಮಗು ಸೇರಿದಂತೆ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ರೇಖಾ (45), ರೇಖಾ (32), ಕೃಷ್ಣಾದೇವಿ (70), ಕವಿತಾ (36) ಮತ್ತು ಒಂದು ವರ್ಷದ ಕುಮಾರಿ ಓಜಸ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಉಮೇಶ್, ಮತ್ತು ಅವರ ಪತ್ನಿ ಪ್ರಿಯಾ ಹಾಗೂ ಅವರ ಪುತ್ರಿ ಗೋಟು (12), 26 ವರ್ಷದ ರಿಷಬ್ ಮತ್ತು ಚಾಲಕ ಇರ್ಷಾದ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಅಪಘಾತದ ಬಗ್ಗೆ ಆಘಾಥ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯವನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂಒ ಕಚೇರಿ ತಿಳಿಸಿದೆ.
Prayagraj, UP| 5 dead & 5 injured after their car heading towards Vindhyachal collided with electric pole on highway near Handia. Injured sent to hospital & post-mortem of dead being done. Police & admn extending all kinds of help to affected families: A Agrawal, Addl SP Gangapar pic.twitter.com/WM7izDtEk9
— ANI UP/Uttarakhand (@ANINewsUP) October 27, 2022