ಕೃಷಿ ತೋಟದಲ್ಲಿ ಕಾಡಾನೆಗಳ ಫಜೀತಿ: ಕೆರೆಯಲ್ಲಿ ಕೇಳಿಸ್ತಿದೆ ಈಗ ರಕ್ಷಣೆಗೆ ಮೊರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ಕೃಷಿ ತೋಟದ ಕೆರೆಗೆ ಇಳಿದು ಮೇಲೇರಲಾಗದೆ ಘಜೀತಿಗೊಳಗಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ನಡೆದಿದ್ದು, ಅನೆಗಳ ರಕ್ಷಣಾ ಕಾರ್ಯ ಭರದಿಂದ‌ ಸಾಗಿದೆ.

ಇಲ್ಲಿನ ತುದಿಯಡ್ಕದ ಕೃಷಿಕರೋರ್ವರ ತೋಟದಲ್ಲಿ ಈ ಘಟನೆ ನಡೆದಿದೆ. ಎರಡು ಮರಿಯಾನೆ ಹಾಗೂ ಎರಡು ದೊಡ್ಡ ಆನೆ ಕಳೆದ‌ ರಾತ್ರಿ‌ ಆಹಾರ ಅರಸುತ್ತಾ ಇಲ್ಲಿಗೆ ಬಂದಿದ್ದವು. ಈ ವೇಳೆ ಕಾಲು ಜಾರಿ ಕೆರೆಗೆ ಉರುಳಿವೆ.

ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿದ್ದು, ಜೆಸಿಬಿ ಯಂತ್ರ ಬಳಸಿ ಕೆರೆಯನ್ನು ಅಗಲ ಮಾಡಿ ಕಾಡಾನೆಗಳನ್ನು ಹೊರತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!