ಆ ಎರಡು ದಿನಗಳ ಕಾಲ ತಿರುಪತಿ ದೇವಾಲಯ ಬಂದ್:‌ ಸರ್ವದರ್ಶನಕ್ಕೆ ಮಾತ್ರ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಕ್ಟೋಬರ್ 25 ಮತ್ತು ನವೆಂಬರ್ 8 ರಂದು ತಿರುಮಲ ಶ್ರೀವಾರಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಈ ತಿಂಗಳ 25 ರಂದು ಸೂರ್ಯಗ್ರಹಣ ಮತ್ತು ನವೆಂಬರ್ 8 ರಂದು ಚಂದ್ರಗ್ರಹಣ ಇರುವುದರಿಂದ ಆ ದಿನಗಳಲ್ಲಿ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ತಿರುಮಲ ತಿರುಪತಿ ದೇವಸ್ಥಾನವು ವಿರಾಮ ದರ್ಶನ, ಶ್ರೀವಾಣಿ, 300ರೂ. ವಿಶೇಷ ಪ್ರವೇಶ ದರ್ಶನ ಹಾಗೂ ಇತರೆ ಆರ್ಜಿತ ಸೇವೆಗಳನ್ನು ರದ್ದುಗೊಳಿಸಿದೆ. ಭಕ್ತರಿಗೆ ಸರ್ವದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇದೇ 25 ರಂದು ಸಂಜೆ 5.11 ರಿಂದ 6.27 ರವರೆಗೆ ಸೂರ್ಯಗ್ರಹಣ ಇರುತ್ತದೆ. ಹೀಗಾಗಿ ಬೆಳಗ್ಗೆ 8.11ರಿಂದ ಸಂಜೆ 7.30ರವರೆಗೆ ಶ್ರೀವಾರಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಸರ್ವದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ನವೆಂಬರ್ 8 ರಂದೂ ಸಹ ಮಧ್ಯಾಹ್ನ 2.39 ರಿಂದ 6.27 ರವರೆಗೆ ಚಂದ್ರಗ್ರಹಣ ಇರುವುದರಿಂದ ಶ್ರೀವಾರಿ ದೇವಸ್ಥಾನದ ಬಾಗಿಲುಗಳನ್ನು ಬೆಳಿಗ್ಗೆ 8.40 ರಿಂದ ಸಂಜೆ 7.20 ರವರೆಗೆ ಮುಚ್ಚಲಾಗುತ್ತದೆ. ಚಂದ್ರಗ್ರಹಣ ಮುಗಿದ ಬಳಿಕ ಸರ್ವದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!