ಹೊಸದಿಗಂತ ವರದಿ, ಮಂಡ್ಯ:
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನಾಲೆಗೆ ಉರುಳಿ ಬಿದ್ದು, ನಾಲ್ವರಿಗೆ ತೀವ್ರ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಮಾಚಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಪಾಂಡವಪುರದ ಸಂಪತ್ರಾಜ್ (45), ಪತ್ನಿ ಪ್ರತಿಭಾ (35) ಹಾಗೂ ಇವರ ಇಬ್ಬರು ಮಕ್ಕಳು ಮಕ್ಕಳು ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಸಂಪತ್ರಾಜ್ ಪತ್ನಿ ಮಕ್ಕಳೊಂದಿಗೆ ಪಾಂಡವಪುರಕ್ಕೆ ಬಂದಿದ್ದರು. ವಾಪಸ್ಸು ಮಧ್ಯಾಹ್ನ 2 ಕಾರಿನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಮಾರು 50 ಅಡಿ ಅಳದ ವಿಸಿ ನಾಲೆಗೆ ಕಾರು ಉರುಳಿದ ಹಿನ್ನಲೆಯಲ್ಲಿ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ಶಿವಳ್ಳಿ ಪಿಎಸ್ಐ ರವಿಕುಮಾರ್ ಡಿ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.