ಕುಡಿದ ನಶೆಯಲ್ಲಿ ಹೋಟೆಲ್ ಒಳಕ್ಕೆ ಕಾರು ನುಗ್ಗಿಸಿದ ಚಾಲಕ!

ಹೊಸದಿಗಂತ ವರದಿ ವಿಜಯಪುರ:
ಕುಡಿದ ನಶೆಯಲ್ಲಿ ಚಾಲಕ ರಸ್ತೆ ಬದಿಯ ಹೋಟೆಲ್‌ಗೆ ಕಾರು ನುಗ್ಗಿಸಿದ್ದು,
5 ಕ್ಕೂ ಹೆಚ್ಚು ಹೋಟೆಲ್‌ಗಳ ಪೀಠೋಪಕರಣಗಳು ಹಾನಿಯಾಗಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಇಲ್ಲಿನ ರಸ್ತೆ ಬದಿಯ ಹೋಟೆಲ್‌ಗೆ KA-28 M 9169 ನಂಬರ್ ನ ಮಹೀಂದ್ರಾ ಕಾರು ನುಗ್ಗಿದೆ. ಈ ವೇಳೆಯಲ್ಲಿ ಹೋಟೆಲ್‌ನಲ್ಲಿ ಮಲಗಿದ್ದವರು ಕೂಗಳತೆಯಲ್ಲಿ ಪಾರಾಗಿದ್ದಾರೆ. ವಿಠ್ಠಲ ಗೂಗ್ಯಾಳ್ ಎಂಬುವರಿಗೆ ಸೇರಿದ ಕಾರಿನಿಂದ ಅವಘಡ ಸಂಭವಿಸಿದ್ದು, ಡ್ರೈವರ್‌ನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಲಾಗಿದೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!