ಕೆನಡಾದಲ್ಲಿನ ಚಳಿಯ ತೀವ್ರತೆಗೆ ನಾಲ್ವರು ಭಾರತೀಯರು ಬಲಿ, ಗುರುತು ಪತ್ತೆ ಮಾಡಿದ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ 10 ದಿನಗಳ ಹಿಂದೆ ಕೆನಡಾ-ಅಮೆರಿಕ ಗಡಿಯಲ್ಲಿನ ಮ್ಯಾನಿಟೋಬಾದಲ್ಲಿ ಚಳಿಯ ತೀವ್ರತೆಗೆ ಹೆಪ್ಪುಗಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾದ ನಾಲ್ವರ ಮೃತದೇಹದ ಗುರುತು ಪತ್ತೆ ಮಾಡಲಾಗಿದೆ.
ಕೆನಡಾದ ಚಳಿಗೆ ಮೃತಪಟ್ಟ ಅವರೆಲ್ಲರೂ ಭಾರತದ ಗುಜರಾತ್‌ನ ಗಾಂಧಿನಗರದ ಕಲೋಲ್ ತೆಹಸಿಲ್‌ನ ಡಿಂಗುಚಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಕೆನಡಾ ಅಧಿಕಾರಿಗಳು, ಮೃತರನ್ನು ಜಗದೀಶ್‌ ಬಲದೇವ್‌ ಭಾಯ್‌ ಪಟೇಲ್‌ (39), ವೈಶಾಲಿ ಬೆನ್‌ (37), ವಿಹಂಗಿ (11). ಧಾರ್ಮಿಕ್‌ (3) ಎಂದು ಗುರುತಿಸಲಾಗಿದೆ.
ಜ.19ರಂದು ಕೆನಡಾದ ಗಡಿ ಭಾಗದಲ್ಲಿ ತೀವ್ರ ಚಳಿಗೆ ಇಡೀ ಕುಟುಂಬ ಮೃತಪಟ್ಟಿತ್ತು. ಇದೀಗ ಅವರ ಗುರುತು ಪತ್ತೆ ಮಾಡಲಾಗಿದ್ದು, ಭಾರತದ ಹೈಕಮಿಷನ್‌ ಅಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!