ಹೊಸದಿಗಂತ ಡಿಜಿಟಲ್ ಡೆಸ್ಕ್
ಕೋಟಾ: ರಾಜಸ್ಥಾನದ ಕೋಟಾ ನಗರದಲ್ಲಿ ಆಡಳಿತವು ಮಾ. 22ರಿಂದ ಏಪ್ರಿಲ್ 21ರವರೆಗೆ ಒಂದು ತಿಂಗಳ ಕಾಲ 144 ಸೆಕ್ಷನ್ ವಿಧಿಸಿದೆ. ಇದಕ್ಕೆ ಕಾರಣ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಪ್ರಸಕ್ತ ಪ್ರದರ್ಶನ. ಇದು ರಾಜಸ್ಥಾನದ ಕಾಂಗ್ರೆಸ್ ಸರಕಾರದ ದುರ್ನೀತಿಯನ್ನು ಪ್ರದರ್ಶಿಸುತ್ತಿದೆ.
ಕೋಟಾ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ದಿ ಕಾಶ್ಮೀರ ಫೈಲ್ಸ್ ಚಿತ್ರಪ್ರದರ್ಶನ ಮತ್ತು ಮುಂಬರುವ ಹಬ್ಬಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮಾ. 22ರಿಂದ ಏಪ್ರಿಲ್ 21ರವರೆಗೆ ಕೋಟಾದಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ.
Rajasthan government under Congress party has now imposed Section 144 in Kota to stop people from watching #TheKashmirFiles.
Residents must approach HC!
Will extend legal support.@vivekagnihotri @AnupamPKher @DarshanKumaar @bhashasumbli pic.twitter.com/sBreba5DS8— Shashank Shekhar Jha (@shashank_ssj) March 21, 2022
ಶುಭ ಶುಕ್ರವಾರ, ಯಥಾ ಚೇತಿಚಂದ್, ಮಹಾವೀರ ಜಯಂತಿ, ಬೈಸಾಖಿ ಮತ್ತು ಜುಮಾತುಲ್ವಿದಾ ಸೇರಿದಂತೆ ಮುಂಬರುವ ಹಬ್ಬಗಳು ಮತ್ತು ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರದ ಪ್ರದರ್ಶನದ ಹಿನ್ನೆಲೆಯಲ್ಲಿ ಆಡಳಿತವು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೆಕ್ಷನ್ 144 ಅನ್ನು ವಿಧಿಸಿದೆ. ಅನೇಕ ಎಚ್ಚರಿಕೆಗಳ ಹೊರತಾಗಿಯೂ ಚಿಕ್ಕ ಹುಡುಗರು ಚಂಬಲ್ ಮತ್ತು ಇತರ ನದಿಗಳಲ್ಲಿ ಈಜುತ್ತಾರೆ. ಇದರಿಂದಾಗಿ ಈ ವರ್ಷ 12ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಆದೇಶದಲ್ಲಿ ಅಂತಹ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ.
Rajasthan | District Administration imposes Section 144 in Kota till April 21, in view of maintaining law & order with the screening of 'The Kashmir Files' movie. pic.twitter.com/z12jClOPhA
— ANI MP/CG/Rajasthan (@ANI_MP_CG_RJ) March 22, 2022
ಕೋಟಾ ಜಿಲ್ಲೆಯು ಕೋಮು ಸೂಕ್ಷ್ಮ ಜಿಲ್ಲೆ ಎಂದು ಉಲ್ಲೇಖಿಸಿ, ಕಿಡಿಗೇಡಿಗಳು ಮುಂಬರುವ ಹಬ್ಬಗಳು, ದಿ ಕಾಶ್ಮೀರ ಫೈಲ್ಸ್ ಚಿತ್ರ ಪ್ರದರ್ಶನದ ವೇಳೆ ಕೋಮು ಗಲಭೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸೆಕ್ಷನ್ 144 ವಿಧಿಸಿರುವುದರಿಂದ ಸಿನಿಮಾ ಪ್ರದರ್ಶನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಜನ ಸೇರದಂತೆ ನಿರ್ಬಂಧ ಹೇರಲಾಗಿದೆ. ಮುಂಬರುವ ಉತ್ಸವಗಳನ್ನು ವಿಧ್ಯುಕ್ತವಾಗಿ ನಡೆಸಲಾಗುತ್ತದೆ. ನದಿಗಳು ಮತ್ತು ಕಾಲುವೆಗಳಲ್ಲಿ ಜನರು ಸ್ನಾನ ಮಾಡಲು ಅನುಮತಿ ಇರುವುದಿಲ್ಲ. ಈ ಆದೇಶದಲ್ಲಿ ಡಿಜೆ ಸಿಸ್ಟಂಗಳ ಮೇಲೂ ನಿಷೇಧ ಹೇರಲಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಅಶಾಂತಿ ಉಂಟು ಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮದ ಬಗ್ಗೆ ಆದೇಶವು ಸುಳಿವು ನೀಡಿದೆ.
ಬಿಜೆಪಿಯಿಂದ ‘ಟಾರ್ಗೆಟ್’ ಆರೋಪ:
ಕಾಂಗ್ರೆಸ್ ಸರಕಾರವು ಚಂಡಿ ಮೆರವಣಿಗೆಯನ್ನು ಸ್ಥಗಿತಗೊಳಿಸಲು ಈ ಆದೇಶ ಹೊರಡಿಸಿದೆ ಎಂದು ಬಿಜೆಪಿ ಮಾಜಿ ಶಾಸಕ ಪ್ರಹ್ಲಾದ್ ಗುಂಜಾಲ್ ಅವರು ಆರೋಪಿಸಿದ್ದಾರೆ. ಕೋಟಾ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಇಂದು (ಮಾ. 22) ನಡೆಯಲಿರುವ ಬೃಹತ್ ಚಂಡಿ ಮೆರವಣಿಗೆಯನ್ನು ನಿಷೇಧಿಸಲು ಆದೇಶ ಜಾರಿಗೊಳಿಸಿದೆ. ದಿ ಕಾಶ್ಮೀರ ಫೈಲ್ಸ್ ಕೇವಲ ಒಂದು ನೆಪವಷ್ಟೇ ಎಂದವರು ಹೇಳಿದ್ದಾರೆ.