ಹೊಸದಿಗಂತ ವರದಿ, ಬನವಾಸಿ:
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಬೀಗ ಮುರಿದು ಆಭರಣ ಮತ್ತು ನಗದು ಹಣವನ್ನು ದೋಚಿದ ಘಟನೆ ಸಮೀಪದ ತಿಗಣಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಕೂಲಿ ಕೆಲಸ ಮಾಡುತ್ತಿದ್ದ ಸರೋಜಾ ದೇವೇಂದ್ರ ಕಬ್ಬೇರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಬುಧವಾರ ಸಂಜೆ ಅವರು ಮನೆಗೆ ಬೀಗ ಹಾಕಿ ಸೊರಬ ತಾಲೂಕಿನ ಶಾನವಳ್ಳಿಯ ನೆಂಟರ ಮನೆಗೆ ತೆರಳಿದ್ದರು. 20 ಸಾವಿರ ರೂ. ಬೆಲೆಯ ಬಂಗಾರದ ಚೈನ್, 3 ಸಾವಿರ ರೂ. ಬೆಲೆಯ ಬೆಳ್ಳಿ ಆಭರಣ, 2 ಸಾವಿರ ರೂ. ಬೆಲೆಯ ಬಂಗಾರದ ಗುಂಡು ಮತ್ತು 55 ಸಾವಿರ ರೂ. ನಗದು ಹಣ ಕಳ್ಳರ ಪಾಲಾಗಿದೆ. ಬನವಾಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.