ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಸಂಬಲ್ಪುರದಲ್ಲಿ ತಾಯಿಯೊಬ್ಬಳು ತನ್ನ ಹೆಣ್ಣುಮಗುವನ್ನು ಕೊಳವೆ ಬಾವಿಗೆ ಹಾಕಿ ಪರಾರಿಯಾಗಿದ್ದಾರೆ.
ಮಗುವಿನ ಅಳುವ ಸದ್ದು ಕೇಳಿ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ನವಜಾತ ಶಿಶುವನ್ನು ಕೊಳವೆ ಬಾವಿಯಿಂದ ಹೊರತೆಗೆಯಲಾಗಿದೆ.
20 ಅಡಿ ಆಳದಲ್ಲಿದ್ದ ಮಗುವಿಗೆ ಆಕ್ಸಿಜನ್ ಪೂರೈಕೆ ಮಾಡಿ ಐದು ಗಂಟೆ ನಂತರ ಸುರಕ್ಷಿತವಾಗಿ ಮಗುವನ್ನು ಹೊರತರಲಾಗಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳು ಬೇಡ ಎಂದರೆ ಅನಾಥಾಶ್ರಮದ ಮುಂದೆ ಬಿಟ್ಟು ಹೋಗಬೇಕಿತ್ತು, ಈ ರೀತಿ ಮಗು ಬದುಕುತ್ತದೋ ಇಲ್ಲವೋ ಎಂದು ಅನುಮಾನ ಇರುವ ಜಾಗಕ್ಕೆ ಕಂದನನ್ನು ಎಸೆದು ಹೋದವರಿಗೆ ಶಿಕ್ಷೆ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.