ಮಳೆಯನ್ನೂ ಲೆಕ್ಕಿಸದೆ ಪ್ರಧಾನ ಸೇವಕನ್ನು ಆತ್ಮೀಯವಾಗಿ ಸ್ವಾಗತಿಸಿದ ದೇವರನಾಡಿನ ಜನತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು,ಒಂದೆಡೆ ಭಾರೀ ಮಳೆಯಾದರುಜನರು ಮಳೆಯನ್ನೂ ಲೆಕ್ಕಿಸದೆ ದಾರಿಯಲ್ಲಿ ನಿಂತು ಪ್ರಧಾನ ಸೇವಕ ಅನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಮೋದಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಐಎನ್ಎಸ್ ವಿಕ್ರಾಂತ್‌ನ್ನು ನೌಕಾಪಡಗೆ ನಿಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಕೇರಳಕ್ಕೆ ಭೇಟಿ ನೀಡಿದ್ದಾರೆ.


ಕೊಚ್ಚಿಗೆ ಆಗಮಿಸಿದ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದರು. ಬಳಿಕ ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಬೇಟಿ ನೀಡಿದರು. ಈ ವೇಳೆ ಭಾರಿ ಮಳೆ ಸುರಿಯುತ್ತಿದ್ದು, ಮಳೆಯನ್ನು ಲೆಕ್ಕಿಸದೆ ಜನರು ಮೋದಿಗೆ ಸ್ವಾಗತ ನೀಡಿದರು.

ಕೊಚ್ಚಿಯಿಂದ ಕಾಲಡಿಗೆ ಮೋದಿ ತೆರಳು ಮಾರ್ಗದ್ದುದ್ದಕ್ಕೂ ಜನ ನಿಂತಿದ್ದರು. ಕೊಡೆ ಹಿಡಿದು ನಿಂತಿದ್ದ ಜನ, ಮೋದಿ ಕಾರಿನಲ್ಲಿ ಆಗಮಿಸುತ್ತಿದ್ದಂತೆ ಜೈಕಾರ, ಮೋದಿ ಮೋದಿ ಘೋಷಣೆಗಳು ಮೊಳಗಿತ್ತು. ಮಳೆಯ ನಡುವೆ ಜನರು ಕೈಬೀಸಿ ಶುಭಾಶಯ ಕೋರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!