ಕಡಲತಡಿ ಮಂಗಳೂರಿನಲ್ಲಿ ಪ್ರಧಾನ ಸೇವಕನಿಗೆ ಸಿಕ್ಕಿತು ಭರ್ಜರಿ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಡಲತಡಿ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಇನ್ನು ಪ್ರಧಾನ ಸೇವಕನ ಆಗಮನಕ್ಕೆ ಕಳೆದ ಹಲವು ದಿನಗಳಿಂದ ಸಜ್ಜಾದ ಕರಾವಳಿ ಜನತೆ ಮೋದಿ ಕಂಡು ಸಂಭ್ರಮಪಟ್ಟರು. ಮಂಗಳೂರಿಗೆ ಬರುತ್ತಿದ್ದಂತೆ ಸಾವಿರಾರರು ಜನರು ರಸ್ತೆ ಬದಿಗಳಲ್ಲಿ ನಿಂತು ಮೋದಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

ಕೇರಳದ ಕೊಚ್ಚಿಯಲ್ಲಿ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ಭಾರತೀಯ ನೌಕಾಪಡೆಗೆ ನಿಯೋಜನೆಗೊಳಿಸಿದ ಪ್ರಧಾನಿಮೋದಿ ಬಳಿಕ ನೇರವಾಗಿ ಮಂಗಳೂರಿಗೆ ಬಂದಿಳಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿ ನಾಯಕರು ಮೋದಿಯನ್ನು ಬರಮಾಡಿಕೊಂಡಿರು.

ವಿಮಾನ ನಿಲ್ದಾಣದಿಂದ ಮೋದಿ ರಸ್ತೆ ಮಾರ್ಗ ಮೂಲಕ ಕೂಳೂರಿನಲ್ಲಿ ಗೋಲ್ಡ್ ಫಿಂಚ್ ಮೈದಾನದಕ್ಕೆ ಆಗಮಿಸಿದರು. ಮೋದಿ ಆಗಮನದಿಂದ ವಿಮಾನ ನಿಲ್ದಾಣದ ಸುತ್ತ ಭಾರಿ ಜನ ಸೇರಿದ್ದರು. ವಿಮಾನ ನಿಲ್ದಾಣದಿಂದ ಹೊರಹೋಗುವ ವಾಹನಗಳ ದಾರಿಯಲ್ಲಿ ಕಿಕ್ಕಿಕ್ಕಿರಿದು ತುಂಬಿದ್ದ ಜನ ಮೋದಿಗೆ ಸ್ವಾಗತ ಕೋರಿದರು.

ವಿಮಾನ ನಿಲ್ದಾಣದಿಂದ ಕೂಳೂರಿನತ್ತ ಹೊರಟ ಮೋದಿಗೆ ರಸ್ತೆಯುದ್ದಕ್ಕೂ ಭರ್ಜರಿ ಸ್ವಾಗತ ನೀಡಿದ್ದಾರೆ. ಮೋದಿ ಮೋದಿ ಜಯಘೋಷಗಳು ಮೊಳಗಿತು. ರಸ್ತೆ ಬದಿಗಳಲ್ಲಿ ನಿಂತ ಜನರಿಗೆ ಮೋದಿ ಕೈಬೀಸಿ ಧನ್ಯವಾದ ಅರ್ಪಿಸಿದರು.

ಮೋದಿ ಆಗಮನದ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿ ಕಿಕ್ಕಿರಿದು ತುಂಬಿದ ಜನರನ್ನ ನಿಯಂತ್ರಿಸಲು ಪೊಲೀಸರು ಹೆಚ್ಚಿನ ಮುಂಜಾಗ್ರತೆ ವಹಿಸಿದ್ದರು. ಯಾವುದೇ ಅಹಿತಕರ ಘಟನೆಗೆ ಪೊಲೀಸರು ಅವಕಾಶ ನೀಡಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!