ದಿಗಂತ ವರದಿ ವಿಜಯಪುರ:
ನಗರದ ಗಗನಮಹಲ್ ಉದ್ಯಾನದ ಮರವೊಂದರಲ್ಲಿ ಹಾವು ಹರಿದಾಡುತ್ತಿದ್ದಂತೆ, ಹಕ್ಕಿಗಳು ಗಾಬರಿಗೊಂಡು ಚಿಲಿಪಿಲಿಗುಟ್ಟಿದ ಘಟನೆ ನಡೆದಿದೆ.
ಇಲ್ಲಿನ ಮರದಲ್ಲಿ ಹಾವು ಏರಿ, ಹರಿದಾಡುತ್ತಿದ್ದಂತೆ, ಮರದಲ್ಲಿನ ಅಳಿಲು, ಗಿಳಿವಿಂಡು ಸೇರಿದಂತೆ ಪಕ್ಷಿಗಳು ಗಾಬರಿಯಿಂದ ಚಿಲಿಪಿಲಿಗುಟ್ಟಿವೆ, ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಜನರು ಮರದ ಮೇಲೆ ನೋಡಿದಾಗ, ಮರದ ರಂಬೆಯಲ್ಲಿ ದಾರಿ ಕಾಣದೆ ಹಾವು ಹರಿದಾಡುತ್ತಿರುವುದು ಕಂಡು ಕುತೂಹಲ ಮೂಡಿಸಿದೆ.
ಉದ್ಯಾನದ ಪಕ್ಕದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಹಾವು ನೋಡಲು ವಾಹನ ನಿಲ್ಲಿಸಿದ್ದಕ್ಕೆ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಬಳಿಕ ಪೊಲೀಸ್ ಸಿಬ್ಬಂದಿ ವಾಹನ ದಟ್ಟಣೆ ನಿಯಂತ್ರಿಸಿದರು. ಇದೇ ವೇಳೆ ಹಿಟ್ನಳ್ಳಿ ನಿವಾಸಿ ಉರಗ ಸ್ನೇಹಿ ಉಮೇಶ, ಮರವೇರಿ ಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟರು.