ನಾಲೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ನೀರುಪಾಲು

ಹೊಸದಿಗಂತ ವರದಿ,ಹಾಸನ:

ಭಾನುವಾರ ರಜೆ ಹಿನ್ನಲೆಯಲ್ಲಿ ಹೇಮಾವತಿ ಎಡದಂಡೆ ನ ನಾಲೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲಾಗಿ ಮೃತಪಟ್ಟಿರುವ ಘಟನೆ ಜಿಲ್ಲೆ, ಚನ್ನರಾಯಪಟ್ಟಣ ಹೊರವಲಯದ, ನಾಗಸಮುದ್ರ ಬಳಿ ನಡೆದಿದೆ.

ಪುನೀತ್ (17) ಮೃತಪಟ್ಟ ವಿದ್ಯಾರ್ಥಿ. ಚನ್ನರಾಯಪಟ್ಟಣ ಪಟ್ಟಣದ ಗಾಯತ್ರಿ ಬಡಾವಣೆಯ ಶಿವಣ್ಣ ಎಂಬುವವರ ಪುತ್ರ ಪುನೀತ್ .

ಚನ್ನರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದ.

ಭಾನುವಾರ ರಜೆ ಹಿನ್ನಲೆಯಲ್ಲಿ ಹೇಮಾವತಿ ಎಡದಂಡೆ ನಾಲೆ ಬಳಿ ಈಜಲು ಮೂರ್ನಾಲ್ಕು ಮಂದಿ ಯುವಕರು ತೆರಳಿದ್ದಾರೆ. ಇವರನ್ನು ಕಂಡು ಪುನೀತ್ ಕೂಡ ನಾಲೆಗೆ ಈಜಲು ತೆರಳಿದ್ದಾನೆ.

ಈಜು ಬಾರದ ಹಿನ್ನೆಲೆಯಲ್ಲಿ ನಾಲೆಯಲ್ಲಿ ಮುಳುಗಿದ್ದ ಪುನೀತ್ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಪುನೀತ್ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕೂಡ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!