ಬೈರಾಗಿ ಸಿನಿಮಾ ತಂಡದೊಂದಿಗೆ ಸಕ್ಕರೆ ನಾಡಿಗೆ ಬಂದ ಶಿವಣ್ಣ

ಹೊಸದಿಗಂತ ವರದಿ, ಮಂಡ್ಯ :

ಮುಂಬರುವ ಜುಲೈ 1ರಂದು ಬಿಡುಗಡೆಯಾಗುವ ಬೈರಾಗಿ ಸಿನಿಮಾ ತಂಡ ಪ್ರಮೋಷನ್‌ಗಾಗಿ ಸಕ್ಕರೆ ನಾಡು ಮಂಡ್ಯಕ್ಕೆ ಆಗಮಿಸಿತ್ತು.
ಸಿನಿಮಾ ಪ್ರಮೋಷನ್‌ಗಾಗಿ ಆಗಮಿಸಿದ್ದ ಚಿತ್ರ ತಂಡದೊಂದಿಗೆ ನಟ ಶಿವರಾಜ್‌ಕುಮಾರ್ ಸಹ ಆಗಮಿಸಿದ್ದರು. ಮಂಡ್ಯದ ಅಭಿಮಾನಿಗಳು ಬೈರಾಗಿ ಚಿತ್ರತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ನಗರದ ಜೆ.ಸಿ. ವೃತ್ತಕ್ಕೆ ಆಗಮಿಸಿದ ಚಿತ್ರತಂಡಕ್ಕೆ ಪಟಾಕಿ ಸಿಡಿಸಿ ಸ್ವಾಗತಿಸಿದರು. ಶಿವರಾಜ್‌ಕುಮಾರ್‌ರವರಿಗೆ ಜೆಸಿಬಿ ಮೂಲಕ ಬೃಹತ್ ಹೂವಿನ ಹಾರ ಹಾಕಿ ಪುಷ್ಪವೃಷ್ಠಿ ಸುರಿಸಿದರು.
ಬಳಿಕ ಶಿವರಾಜ್‌ಕುಮಾರ್ ಅವರು ವೃತ್ತದಲ್ಲಿ ಸ್ಥಾಪಿಸಿದ್ದ ವರನಟ ಡಾ. ರಾಜ್‌ಕುಮಾರ್ ಪುತ್ಥಳಿಗೆ ಹಾರ ಹಾಕಿ ಪುಷ್ಪಾರ್ಚನೆ ಮಾಡಿ ನಮಿಸಿದರು.
ಬಳಿಕ ಬೈರಾಗಿ ಪ್ರಚಾರದ ವಾಹನದ ಮೇಲೆ ನಿಂತ ಶಿವಣ್ಣ ಅವರು ಚಿತ್ರದ ಹಾಡೊಂದಕ್ಕೆ ಸ್ಪೆಪ್ ಹಾಕಿ ಅಭಿಮಾನಿಗಳಿಗೆ ಖುಷಿ ನೀಡಿದರು. ಶಿವರಾಜ್‌ಕುಮಾರ್‌ಗೆ ಡಾಲಿ ಧನಂಜಯ ಸಾಥ್ ನೀಡಿದರು. ನೆಚ್ಚಿನ ನಟನ ಜೊತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು. ಇದೇ ವೇಳೆ ಪವರ್‌ಸ್ಟಾರ್ ಅಪ್ಪುಗೆ ಜೈಕಾರ ಹಾಕಿ ತಮ್ಮ ಅಭಿಮಾನವನ್ನು ಮೆರೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!