April 30, 2026
Thursday, April 30, 2026
spot_img

ಯುಪಿ ಸರಕಾರದಲ್ಲಿ ಜನರ ಸುರಕ್ಷತೆಗೆ ಯಾವುದೇ ಭರವಸೆ ಇಲ್ಲ: ಅಖಿಲೇಶ್ ಯಾದವ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು, ಸೈಬರ್ ಕ್ರೈಂಗಳು ಮತ್ತು ಭ್ರಷ್ಟಾಚಾರಗಳು ರಾಜ್ಯದಾದ್ಯಂತ ತೀವ್ರವಾಗಿ ಹೆಚ್ಚಾಗಿವೆ. ಈ ಸರ್ಕಾರದ ಅಡಿಯಲ್ಲಿ ಜನರ ಸುರಕ್ಷತೆಗೆ ಯಾವುದೇ ಭರವಸೆ ಇಲ್ಲ ಎಂದು ಸಂಸದ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ‘ಜೀರೋ ಟಾಲರೆನ್ಸ್’ ನೀತಿ ಸಂಪೂರ್ಣವಾಗಿ ವಿಫಲವಾಗಿದೆ. ಪ್ರತಿದಿನ ಐದು ಮಹಿಳೆಯರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಅತ್ಯಾಚಾರದ ನಾಚಿಕೆಗೇಡಿನ ಘಟನೆಗಳು ಸಂಭವಿಸುತ್ತವೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮುಖ್ಯಮಂತ್ರಿಯನ್ನು 2027 ರಲ್ಲಿ ರಾಜ್ಯದ ಜನರು ಅಧಿಕಾರದಿಂದ ಹೊರಹಾಕುತ್ತಾರೆ ಎಂದು ಟೀಕಿಸಿದರು.

ಈ ವೇಳೆ ಎಸ್‌ಐಆರ್ ಬಗ್ಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯನ್ನು ಯಾವ ಪಕ್ಷವೂ ವಿರೋಧಿಸಿಲ್ಲ. ಪ್ರಮುಖ ಸಮಾಜದ ವೋಟ್‌ಗಳನ್ನು ಕಡಿಮೆ ಮಾಡಿ, ತಮ್ಮ ವೋಟ್‌ಗಳನ್ನು ಹೆಚ್ಚಿಸುವ ಸಂಚು ನಡೆಯುತ್ತಿದೆ. ಈ ಸಂಚನ್ನು ತಡೆಯಲು ವೋಟರ್ ಐಡಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ವೋಟ್‌ಗಳನ್ನು ಆಧಾರ್‌ಗೆ ಜೋಡಿಸಿದರೆ ಮಾತ್ರ ವೋಟ್ ಮೋಸವನ್ನು ತಪ್ಪಿಸಬಹುದು. ಇದು ಪಿಡಿಎ ಸಮಾಜದ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುತ್ತದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !