ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಸ್ತೆಗಳಲ್ಲಿ ಕೊಲೆಪಾತಕ ಗುಂಡಿಗಳಾಗಿವೆ. ಇದಕ್ಕೆಲ್ಲಾ ಪರ್ಸೆಂಟೇಜ್ ವ್ಯವಸ್ಥೆ ಕಾರಣ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಹಿಂದೆ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ, ಉದ್ಯಾನನಗರಿ, ಸಿಲಿಕಾನ್ ವ್ಯಾಲಿ ಎಂದೆಲ್ಲಾ ಕರೆಯುತ್ತಿದ್ದರು. ಆದರೆ ಈಗ ಗುಂಡಿಗಳೂರು, ಅಧ್ವಾನನಗರ, ಗುಂಡಿಗಳ ವ್ಯಾಲಿ ಎಂದು ಕರೆಯುವಂತಾಗಿದೆ. ಕಾಮಗಾರಿಗಳಲ್ಲಿ ಪರ್ಸೆಂಟೇಜ್ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಬಿಜೆಪಿಗೆ ಗುಂಡಿ ಎಂದರೆ ಇಷ್ಟ. ಗುಂಡಿಗಳು ಬಿದ್ದಷ್ಟೂ ಇವರ ಜೇಬಿಗೆ ಹಣ ಬರುತ್ತದೆ. ಯಾರು ಎಷ್ಟು ಬೈದರೂ ಇವರಿಗೆ ಸಂಕೋಚ ಇಲ್ಲ ಎಂದಿದ್ದಾರೆ.