ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್ಕುಮಾರ್ ಹೋಲುವ ನಟ ಆನಂದ್ ಆರ್ಯ ಇದೀಗ ಸ್ಯಾಂಡಲ್ವುಡ್ನಲ್ಲಿ ತಮ್ಮ ಎರಡನೇ ಸಿನಿಮಾ ಮಾಡುತ್ತಿದ್ದಾರೆ.
ಹಾವ ಭಾವ ಹಾಗೇ ದೂರದಿಂದ ನೋಡಿದ್ರೆ ಪುನೀತ್ ಮತ್ತೆ ಬಂದಿದ್ದಾರೇನೋ ಎನ್ನುವಂತೆ ಆನಂದ್ ಕಾಣುತ್ತಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಹಲವರು ನೀವು ಥೇಟ್ ಪುನೀತ್ ಎಂದು ಆನಂದ್ಗೆ ಹೇಳಿದ್ದಾರಂತೆ, ಅದಕ್ಕೆ ಆನಂದ್ ಪ್ರತಿಕ್ರಿಯೆ ನೀಡಿದ್ದು, ಪುನೀತ್ ನನಗೆ ಆದರ್ಶ. ಅವರ ರೀತಿ ಕಾಣಿಸಿದರೆ ಅದು ಹೆಮ್ಮೆ. ಅವರ ಹೆಸರನ್ನು ದುರ್ಬಳಕೆ ಮಾಡುವ ಕೆಲಸ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಆನಂದ್ ಈಗಾಗಲೇ ಕನ್ನಡದಲ್ಲಿ ಛಾಯೆ ಎನ್ನುವ ಸಿನಿಮಾ ಮಾಡಿದ್ದು, ಇದೀಗ ಸುನಾಮಿ ಗುರುಮೂರ್ತಿ ಆಕ್ಷನ್ ಕಟ್ ಹೇಳುತ್ತಿರುವ ಮಾರಕಾಸ್ತ್ರ ಸಿನಿಮಾಗೂ ಅವರೇ ಹೀರೋ.