ನಿಷೇಧಿತ ಸಂಘಟನೆ ಹೆಸರಿನಲ್ಲಿ ಗೋಡೆ ಬರಹ ಬರೆಯುವವರು ಹೇಡಿಗಳು: ಈಶ್ಚರಪ್ಪ

ಹೊಸದಿಗಂತ ವರದಿ ಶಿವಮೊಗ್ಗ:

ನಿಷೇಧಿತ ಸಂಘಟನೆ ಹೆಸರಿನಲ್ಲಿ ಗೋಡೆ ಬರಹ ಬರೆಯುವವರು ಹೇಡಿಗಳು. ಅವರನ್ನು ಸರ್ಕಾರ ಮಟ್ಟ ಹಾಕಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಶಿರಾಳಕೊಪ್ಪದಲ್ಲಿ ಪಿಎಫ್ ಯ ಸೇರಿ ಎಂದು ಗೋಡೆ ಮೇಲೆ ಬರೆದಿರುವುದು ಖಂಡನೀಯ ಪಿಎಫ್ ಐ ಕಾರ್ಯಕರ್ತರು ಎಂದಿಗೂ ಎದುರಿಗೆ ಬಂದು ಹೋರಾಟ ಮಾಡುವುದಿಲ್ಲ. ರಾತ್ರಿ ಗಲಭೆ, ಕೊಲೆ ಮಾಡುವುದು ಇವರ ಕೃತ್ಯವಾಗಿದೆ ಎಂದರು.

ನಗುನಗುತ್ತಲೇ ಪಾಕಿಸ್ಥಾನ ಪಡೆದಿದ್ದೇವೆ. ಹೋರಾಟದಿಂದ ಹಿಂದೂಸ್ತಾನ ಪಡೆಯುತ್ತೇವೆ ಎನ್ನುವ ಅವರ ಧೋರಣೆ ಎಂದಿಗೂ ಫಲಿಸುವುದಿಲ್ಲ. ಇಂತಹ‌ ದೇಶ ದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿರುವ ಪರಿಣಾಮ ಪಾಕಿಸ್ಥಾನ ಆಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶ ದ್ರೋಹಿಗಳನ್ನು ಹೊಸಕಿ ಹಾಕಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!