ಹೊಸದಿಗಂತ ವರದಿ, ಅಂಕೋಲಾ:
ಉರುಳು ಹಾಕಿ ಕಾಡು ಹಂದಿಯನ್ನು ಕೊಂದು ಮಾಂಸ ಬೇಯಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮಾಸ್ತಿಕಟ್ಟೆ ವಲಯ ವ್ಯಾಪ್ತಿಯ ಅಗಸೂರು ಗ್ರಾಮದ ಈರನ ಮೂಲೆ ಮಜಿರೆಯಲ್ಲಿ ನಡೆದಿದೆ.
ಈರನಮೂಲೆ ನಿವಾಸಿಗಳಾದ ಲಕ್ಷ್ಮಣ ರಾಕು ಗೌಡ, ಶಾಂತಾ ಗಣಪತಿ ಗೌಡ, ಗಣಪತಿ ಸುಕ್ರು ಗೌಡ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಹಂದಿ ಮಾಂಸ ಮತ್ತು ಉರುಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪ ವಲಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಳ್ಳಪ್ಪನವರ್, ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಅಂಗಡಿ, ರಾಘವೇಂದ್ರ ಜೀರಗಾಳೆ, ರತೀಶ ನಾಯಕ, ಗೌಡಪ್ಪ ಅಂಗಡಿ, ಅರುಣ ನಡಕಟ್ಟೆ, ಅರಣ್ಯ ರಕ್ಷಕ ವೆಂಕಟೇಶ ಗುತ್ತೇದಾರ, ಅಬಲಪ್ಪ, ರುದ್ರಗೌಡ ಪಾಟೀಲ್ ,ಪ್ರಶಾಂತ, ಚನ್ನಪ್ಪ ಲಮಾಣಿ ಪಾಲ್ಗೊಂಡಿದ್ದರು