ಹೊಸದಿಗಂತ ವರದಿ,ಮೈಸೂರು:
ಜೋಳ ಬಿಡಿಸುವ ಟ್ರ್ಯಾಕ್ಟರ್ ಮಗುಚಿ ಬಿದ್ದು ಮೂವರು ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ನೆರಗ್ಯಾತನಹಳ್ಳಿಯಲ್ಲಿ ಶನಿವಾರ ನಡೆದಿದೆ.
ತಿ.ನರಸೀಪುರ ತಾಲೂಕಿನ ಬೂದಹಳ್ಳಿ ಗ್ರಾಮದ ನಿವಾಸಿ ಲೇ ಗವಿಸಿದ್ದಯ್ಯ ಎಂಬುವರ ಪುತ್ರ ಮರಿಜೋಗಿ (45), ಮಹದೇವ್ ಎಂಬುವರ ಮಗ ಪ್ರಕಾಶ್ ಹಾಗೂ ನಾಗರಾಜು ಎಂಬುವರ ಪುತ್ರ ಸಂತೋಷ್ (19) ಮೃತಪಟ್ಟ ದುದೈವಿಗಳು. ಚಿಟಗಯ್ಯನಕೊಪ್ಪಲು ಗ್ರಾಮದಿಂದ ನೆರಗ್ಯಾತನಹಳ್ಳಿಗೆ ಹೋಗುವ ರಸ್ತೆಯಲ್ಲಿ ಹುಲ್ಲಿನ ಜೋಳ ಬಿಡಿಸುವ ಟ್ರಾಕ್ಟರ್ನಲ್ಲಿ ಇವರು ಹೋಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಮಗುಚಿ ಬಿದ್ದಿದ್ದು, ಅದರೊಳಗೆ ಸಿಲುಕಿದ ಈ ಮೂವರು ತೀವ್ರವಾಗಿ ಗಾಯಗೊಂಡು ಅಸುನೀಗಿದರು. ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಆರ್.ಚೇತನ್, ಎಎಸ್ಪಿ ನಂದಿನಿ, ಡಿವೈಎಸ್ಪಿ ಗೋವಿಂದ ರಾಜು, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಭೇಟಿ ನೀಡಿ, ಪರಿಶೀಲಿಸಿದರು. ತಿ.ನರಸೀಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.