ದಿನಭವಿಷ್ಯ: ನಿಮ್ಮ ವ್ಯವಹಾರ ಚಾತುರ್ಯಕ್ಕೆ ಇಂದು ತಕ್ಕ ಫಲ ದೊರೆಯಲಿದೆ!

ಸೋಮವಾರ, 28 ಫೆಬ್ರವರಿ  2022, ಮಂಗಳೂರು

ಮೇಷ
ನಿಮ್ಮ ವ್ಯವಹಾರ ಚಾತುರ್ಯಕ್ಕೆ ಉತ್ತಮ ಫಲ ಸಿಗುವುದು. ಬಹುಮುಖ್ಯ ಕಾರ್ಯ ಈಡೇರುವುದು. ಕೌಟುಂಬಿಕ ಅಶಾಂತಿ ನಿವಾರಣೆ.

ವೃಷ
ಕಷ್ಟಗಳಿಲ್ಲದ, ಚಿಂತೆಗಳಿಲ್ಲದ ನಿರಾಳ ದಿನ. ಬಂಧುಮಿತ್ರರ ಜತೆ ಆತ್ಮೀಯ ಕಾಲಕ್ಷೇಪ. ಉದ್ಯೋಗದಲ್ಲಿ ಹೆಚ್ಚಿನ ಏರುಪೇರುಗಳು ಸಂಭವಿಸಲಾರವು.

ಮಿಥುನ
ಮನೆಯವರ ಇಷ್ಟಾರ್ಥ ಈಡೇರಿಸಲು ಕೊನೆಗೂ ಮನ ಮಾಡುವ ಸಾಧ್ಯತೆಯಿದೆ. ಸ್ವಲ್ಪ ಹಣ ಜಾರಿದರೂ ಮನಸ್ಸಿಗೆ ತೃಪ್ತಿಯಾಗಲಿದೆ. ಕೌಟುಂಬಿಕ ನೆಮ್ಮದಿ.

ಕಟಕ
ನಿಮ್ಮ ನೆಗೆಟಿವ್ ಚಿಂತನೆ ಗಳು ಮನಸ್ಸಿನ ನೆಮ್ಮದಿ ಹಾಳು ಮಾಡಬಹುದು. ಪ್ರತೀ ವಿಷಯಕ್ಕೂ ನಕಾರಾತ್ಮಕವಾಗಿ ಆಲೋಚಿಸುವುದು ಬಿಟ್ಟುಬಿಡಿ.

ಸಿಂಹ
ಭೌತಿಕ ವಸ್ತುಗಳಿಂದಲೇ ಜೀವನದಲ್ಲಿ ಸುಖ ಸಿಗುವುದು ಎಂಬ ನಿಮ್ಮ ಕಲ್ಪನೆ ಬದಲಿಸುವಂತಹ ಪ್ರಸಂಗ ಉಂಟಾದೀತು. ಅನುಭವ ದಿಂದ ಪಾಠ ಕಲಿಯಬೇಕು.

ಕನ್ಯಾ
ಪೂರ್ಣ ಮನಸ್ಸಿನಿಂದ ಕಾರ್ಯವೆಸಗಿದರೂ ನೀವು ನಿರೀಕ್ಷಿಸಿದ ಫಲಿತಾಂಶ ಮಾತ್ರ ಸಿಗುವುದಿಲ್ಲ. ಇದರಿಂದ ಮನಸ್ಸಿಗೆ ತುಸು ಬೇಸರ ಉಂಟಾದೀತು.

ತುಲಾ
ಕಾರ್ಯ ಸಾಧನೆಗೆ ತುಂಬಾ ಶ್ರಮ ಪಡಬೇಕಾಗುವುದು. ಆದರೆ ಅಂತ್ಯದಲ್ಲಿ ಅತ್ಯಂತ ತೃಪ್ತಿಕರ ಫಲಿತಾಂಶ ಪಡೆಯುವಿರಿ.

ವೃಶ್ಚಿಕ
ನಿಮ್ಮ ಯಶಸ್ಸಿಗೆ ಕುಟುಂಬವು ಮುಖ್ಯ ಕಾರಣವಾಗುತ್ತದೆ. ಕೈಹಿಡಿದ ಕಾರ್ಯದಲ್ಲಿ ಯಶಸ್ಸು. ಆರ್ಥಿಕ ಪರಿಸ್ಥಿತಿ ಉತ್ತಮ. ಖರೀದೀಯ ಉತ್ಸಾಹ.

ಧನು
ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ಉತ್ತಮ ಪ್ರಗತಿ. ಮನಸ್ಸಿಗೆ ಆಹ್ಲಾದ. ಆರ್ಥಿಕ ನಿಶ್ಚಿಂತೆ. ವ್ಯಕ್ತಿಯೊಬ್ಬರ ಆಕರ್ಷಣೆಗೆ ಸಿಲುಕುವ ಸಾಧ್ಯತೆಯಿದೆ.

ಮಕರ
ಹಣದ ಲೆಕ್ಕಾಚಾರದಲ್ಲಿ ನಿಮ್ಮಿಂದ ಇಂದು ತಪ್ಪಾಗದು. ಹಾಗಾಗಿ ಹೂಡಿಕೆಯಲ್ಲಿ  ಲಾಭ ಗಳಿಸುವಿರಿ. ಕೌಟುಂಬಿಕ ಬೇಡಿಕೆಯೊಂದು ಇಂದು ಈಡೇರಲಿದೆ.

ಕುಂಭ
ಇತರರ ಜತೆ ಉತ್ತಮ ಸಂವಹನ ಸಾಸುವಿರಿ. ಇದರಿಂದ ಕಾರ್ಯದಲ್ಲಿ ಯಶಸ್ಸು. ಮುಜುಗರದ ಪ್ರಸಂಗವೊಂದರಿಂದ ಪಾರಾಗುವಿರಿ. ಆಪ್ತರ ನೆರವು ಲಭ್ಯ.

ಮೀನ
ನಿಮ್ಮ ಇತ್ತೀಚಿನ ಕೆಲವು ವರ್ತನೆ, ಕಾರ್ಯಗಳ ಪರಾಮರ್ಶೆ ನಡೆಸಬೇಕು. ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಲು ಇದುವೇ ಸರಿಯಾದ ಸಮಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!