ದಿನಭವಿಷ್ಯ : ಮಹಾಶಿವರಾತ್ರಿಯಂದು ಹೇಗಿದೆ ಭವಿಷ್ಯ ?

ಮೇಷ
ನಿಮ್ಮೆಡೆಗೆ ಪ್ರೀತಿಪಾತ್ರರ ವರ್ತನೆಯು ಚಿಂತೆಗೆ ಕಾರಣವಾದೀತು. ಇದೆಲ್ಲ ತಾತ್ಕಾಲಿಕ. ಆ ಕುರಿತು ಅತಿಯಾಗಿ ಚಿಂತಿಸಬೇಡಿ. ಕೋಪತಾಪ ನಿಯಂತ್ರಿಸಿ

ವೃಷಭ
ಉತ್ಸಾಹ ಕುಂದಿದ ದಿನ. ನೆರೆಕರೆ ಜತೆ ಜಗಳ ಆದೀತು. ವಾಗ್ವಾದಕ್ಕೆ ಆಸ್ಪದ ಕೊಡದಿರಿ. ಕುಟುಂಬಸ್ಥರ ಜತೆ  ಹೆಚ್ಚು ಕಾಲ ಕಳೆಯಲು  ಗಮನ ಕೊಡಿ.

ಮಿಥುನ
ನಿಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸುವಿರಿ. ಹಳೆಯ ವಿಷಯ ಹೊಸದಾಗಿ ಸಮಸ್ಯೆ ಸೃಷ್ಟಿಸಿದರೂ ಅದನ್ನು ನಿಭಾಯಿಸಲು ಶಕ್ತರಾಗುವಿರಿ.

ಕಟಕ
ನಿಮ್ಮ ಕಾರ್ಯವೆಲ್ಲ ಸರಾಗವಾಗಿ ನಡೆದೀತು ಎಂಬ ಭಾವನೆ ಬೇಡ. ಇಂದು ಅನಿರೀಕ್ಷಿತ ತೊಡಕು ಬಾಧಿಸಬಹುದು. ಆಪ್ತರ ಜತೆ ಕಲಹ.

ಸಿಂಹ
ಅದೃಷ್ಟದ ದಿನ. ತೊಂದರೆಗೆ ಸಿಲುಕಿದ್ದ ಕಾರ್ಯ ಸಫಲವಾಗಿ ಮುಗಿಯಲಿದೆ. ಉದ್ಯೋಗದಲ್ಲಿ ಹೊಸ  ಅವಕಾಶ. ಸೌಹಾರ್ದ ಕೌಟುಂಬಿಕ ಪರಿಸರ.

ಕನ್ಯಾ
ಆರೋಗ್ಯಕ್ಕೆ ಸಂಬಂಧಿಸಿ ಎಚ್ಚರವಿರಲಿ. ಮುಖ್ಯವಾಗಿ ಕಂಡದ್ದೆಲ್ಲ ತಿನ್ನಲು ಹೋಗಬೇಡಿ. ವೃತ್ತಿಯಲ್ಲಿ  ಅನುಕೂಲ ಬೆಳವಣಿಗೆ. ಹಣದ ವ್ಯವಹಾರ ತೃಪ್ತಿಕರ.

ತುಲಾ
ನಿಮ್ಮ ಪಾಲಿಗೆ ಇಂದು ಕಠಿಣ ದಿನವಾದೀತು. ಪ್ರತಿಕೂಲ ಪರಿಸ್ಥಿತಿ ಎದುರಾಗುವುದು. ಶಾಂತಚಿತ್ತದಿಂದ ಎಲ್ಲವನ್ನು ನಿಭಾಯಿಸಿ. ಸಂಜೆ ವೇಳೆ ನಿರಾಳತೆ.

ವೃಶ್ಚಿಕ
ಕೆಲವು ಸಮಸ್ಯೆ ಕುರಿತು ಅತಿಯಾಗಿ ಚಿಂತಿಸುತ್ತೀರಿ. ಅದರ ಬದಲಾಗಿ ಪರಿಹಾರದ ಕಡೆ ಗಮನ ಕೊಡಿ. ಸೂಕ್ತ ನೆರವೂ ಒದಗಲಿದೆ. ಆರ್ಥಿಕ ಬಿಕ್ಕಟ್ಟು ಹೆಚ್ಚಳ.

ಧನು
ಭಾವನೆ ಹಂಚಿಕೊಳ್ಳಲು ಹಿಂಜರಿಕೆ ಬೇಕಿಲ್ಲ. ಅದು ದೌರ್ಬಲ್ಯದ ಸಂಕೇತವೂ ಅಲ್ಲ. ಹಳೆಯ ಸ್ನೇಹಿತರ ಭೇಟಿ ಸಂಭವ. ಖರ್ಚು ಇಂದು ಹೆಚ್ಚಬಹುದು.

ಮಕರ
ಉತ್ಸಾಹರಹಿತ ದಿನ. ಇದು ನಿಮ್ಮ ದೈನಂದಿನ ಕಾರ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಬೆನ್ನು ನೋವು, ಸಂಧಿನೋವು ಕಾಡಬಹುದು.

ಕುಂಭ
ಪ್ರತಿಕೂಲ ಪರಿಸ್ಥಿತಿ ಎದುರಿಸಿದರೂ ಅದನ್ನು ಶಾಂತವಾಗಿ ಸ್ವೀಕರಿಸಿ. ಆತುರದ ಪ್ರತಿಕ್ರಿಯೆ ತೋರಿದರೆ ಅದು ನಿಮಗೇ ಹಾನಿಕರ. ಕೌಟುಂಬಿಕ ಸಹಕಾರ.

ಮೀನ
ಬೆಳಗಿನ ಹೊತ್ತು ಉತ್ಸಾಹಹೀನತೆ. ಆದರೆ ದಿನ ಕಳೆದಂತೆ ಉತ್ಸಾಹ ತುಂಬಿಕೊಳ್ಳುವಿರಿ. ಬಾಕಿ ಇರುವ ಕಾರ್ಯ ಮುಗಿಸಲು ಗಮನ ಕೊಡಿ. ಧನಲಾಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!