ದಿನಭವಿಷ್ಯ: ಆತ್ಮೀಯರ ಜತೆಗಿನ ಮನಸ್ತಾಪ ನಿವಾರಣೆ, ಮನಸ್ಸಿಗೆ ನೆಮ್ಮದಿ

ಮೇಷ
ಕೆಲವಾರು ಅಡ್ಡಿ ಆಂತಕ ಎದುರಿಸುವಿರಿ. ಕಠಿಣ ಶ್ರಮ ಪಟ್ಟರೆ ಯಶಸ್ಸು ಸಿಗಲಿದೆ. ಅಹಂ ಭಾವನೆಯು ಸಂಬಂಧದಲ್ಲಿ ಬಿರುಕು ಸೃಷ್ಟಿಸಬಹುದು.

ವೃಷಭ
ಬಿಡುವಿಲ್ಲದ ಕಾರ್ಯ. ಶ್ರಮಕ್ಕೆ ತಕ್ಕ ಫಲವೂ ಸಿಗುವುದು. ಉಪಯುಕ್ತ ನಿರ್ಧಾರ ತಾಳಲು ಇಂದು ಪ್ರಶಸ್ತವಾಗಿದೆ. ಪ್ರೀತಿಪಾತ್ರರಿಂದ ಬೆಂಬಲ, ಪ್ರೋತ್ಸಾಹ.

ಮಿಥುನ
ಕೆಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಅದರಿಂದ ಮನಸ್ಸಿನ ಒತ್ತಡ ನಿವಾರಿಸಬಹುದು. ಹೂಡಿಕೆಗೆ ಒಳ್ಳೆ ದಿನ.

ಕಟಕ
ಆತ್ಮೀಯರ ಜತೆಗಿನ ಸಂಬಂಧ ಸುಧಾರಣೆ. ಮನಸ್ತಾಪ ನಿವಾರಣೆ. ವೃತ್ತಿಯಲ್ಲಿ ಯಶಸ್ಸು. ಸಣ್ಣ ಸಮಸ್ಯೆಯೊಂದು ತಾನಾಗಿ ಪರಿಹಾರ ಕಾಣುವುದು.

ಸಿಂಹ
ಏರುಪೇರಿನ ದಿನ. ಕೆಲವು ಕೆಲಸ ಸುಗಮವಾಗಿ ನಡೆದು ಯಶಸ್ಸು  ನೀಡುವುದು. ಆದರೂ ಮನದೊಳಗೆ ಏನೋ ಬೇಸರ, ಗೊಂದಲ ಅನುಭವಿಸುವಿರಿ.

ಕನ್ಯಾ
ನಿಮ್ಮ ಕಾರ್ಯಕ್ಕೆ ಪ್ರತಿಫಲ ಸಿಗುವುದು ನಿಧಾನವಾದೀತು. ಯಾವುದಕ್ಕೂ ಅವಸರ ತೋರದಿರಿ. ಸಂವಹನ ಕೊರತೆಯಿಂದ ಆಪ್ತರ ಜತೆ ಶೀತಲ ಸಮರ.

ತುಲಾ
ಇಂದು ತೆಗೆದುಕೊಳ್ಳುವ ಪ್ರಮುಖ ನಿರ್ಧಾರ ನಿಮಗೆ ಒಳಿತು ತರಲಾರದು. ಹಾಗಾಗಿ ವಿವೇಚನೆ ಒಳಿತು. ಇತರರ ಮಾತು ಕೇಳಿ ಕೆಡಬೇಡಿ.

ವೃಶ್ಚಿಕ
ಯಶಸ್ಸು ಸುಲಭವಾಗಿ ಸಿಗುವುದು. ಕಷ್ಟವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಮುಗಿವುದು. ಬಂಧುಗಳಿಂದ ಸಹಕಾರ. ಮನಸ್ತಾಪ ನಿವಾರಣೆ, ಬಂಧುತ್ವ ವೃದ್ಧಿ.

ಧನು
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ಪೂರಕ ಬೆಳವಣಿಗೆ. ಕಠಿಣ ಕಾರ್ಯವೂ ಸುಗಮವಾಗಿ ನಡೆಯುವುದು. ಬಂಧುಗಳ ಸಹಕಾರ.

ಮಕರ
ಅಧಿಕ ಕೆಲಸ. ಅಧಿಕ ಒತ್ತಡ. ವಿರಾಮಕ್ಕೆ ಸಮಯ ಸಿಗುವುದಿಲ್ಲ. ಬಂಧುಗಳ ಜತೆ ಸಹನೆಯಿಂದ ವರ್ತಿಸಿ. ಅನವಶ್ಯ ಕಾರಣಕ್ಕೆ ರೇಗಬೇಡಿ.

ಕುಂಭ
ಕೆರಿಯರ್‌ನಲ್ಲಿ ಪ್ರಗತಿ ಸಾಧಿಸುವಿರಿ. ವೈಯಕ್ತಿಕ ಬದುಕಿನಲ್ಲಿ  ಮನಸ್ಸು ಕದಡುವ ಪ್ರಸಂಗ ಉಂಟಾದೀತು. ಆಪ್ತರೆನಿಸಿದವರೇ ನೋವು ನೀಡಿಯಾರು.

ಮೀನ
ಕೆಲದಿನಗಳಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಇಂದು ನಿರಾಳತೆ ಸಿಗಲಿದೆ. ಕೌಟುಂಬಿಕ ಆವಶ್ಯಕತೆ ಸರಿಯಾಗಿ ನೆರವೇರಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!