ದಿನಭವಿಷ್ಯ: ಹಠಾತ್ ಬೆಳವಣಿಗೆ ಸಮಸ್ಯೆ ತಂದೊಡ್ಡಬಹುದು, ಸನ್ನದ್ಧರಾಗಿರಿ

ಮೇಷ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ. ತಾಳ್ಮೆ ಕೆಡಿಸುವ ಪ್ರಸಂಗಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಡಿ. ಆರ್ಥಿಕ ಒತ್ತಡ.

ವೃಷಭ
ಸವಾಲಿನ ಪರಿಸ್ಥಿತಿ. ಅದನ್ನು ಎದುರಿಸುವಾಗ ಭಾಡಿಏಕರಾಗಿ ವರ್ತಿಸದಿರಿ. ನಿರೀಕ್ಷೆ ಈಡೇರದು ನಿರಾಶೆ ಎದುರಿಸುವಿರಿ. ಆರ್ಥಿಕ ಬಿಕ್ಕಟ್ಟು ಸಂಭವ.

ಮಿಥುನ
ಸಣ್ಣ ಸಮಸ್ಯೆಗೂ ಅತಿಯಾಗಿ ತಲೆ ಕೆಡಿಸಿಕೊಂಡು ಮನಶ್ಯಾಂತಿ ಹಾಳು ಮಾಡಿಕೊಳ್ಳುವಿರಿ. ಕೆಲ ವಿಷಯಗಳಲ್ಲಿ ನಿರ್ಲಿಪ್ತ ಧೋರಣೆ ಮುಖ್ಯ.

ಕಟಕ
ನೀವಿಂದು ಎಲ್ಲಾ ವ್ಯವಹಾರಗಳಲ್ಲಿ ಸಹನೆಯಿಂದ ವರ್ತಿಸಬೇಕು. ಭಾವನೆ ನಿಯಂತ್ರಿಸಬೇಕು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

ಸಿಂಹ
ಯಾವುದೇ ಸಮಸ್ಯೆ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರಿ. ಏಕೆಂದರೆ ಹಠಾತ್ ಬೆಳವಣಿಗೆ ನಿಮ್ಮನ್ನು ಸಮಸ್ಯೆಗೆ ನೂಕಲೂ ಬಹುದು. ಅನ್ಯರ ಸಹಕಾರ ಲಭ್ಯ.

ಕನ್ಯಾ
ಕೆಲವು ಬೆಳವಣಿಗೆ ನಿಮ್ಮ ಭಾವನಾತ್ಮಕ ಏರುಪೇರಿಗೆ ಕಾರಣವಾಗುತ್ತದೆ. ಅಹಂ ಬದಿಗಿಟ್ಟು ವ್ಯವಹರಿಸಿ. ಹೊಂದಾಣಿಕೆ ಮುಖ್ಯ.

ತುಲಾ
ಪ್ರಮುಖ ವಿಷಯಗಳಲ್ಲಿ ನಿಮ್ಮ ನಡೆಯ ಕುರಿತಂತೆ ಎಚ್ಚರವಿರಲಿ. ತಪ್ಪು ನಡೆ ದೊಡ್ಡ ನಷ್ಟಕ್ಕೆ ಕಾರಣವಾದೀತು. ಯೋಚಿಸಿ ಹೆಜ್ಜೆಯಿಡಿ. ಪ್ರೀತಿಯಲ್ಲಿ ವೈಫಲ್ಯ.

ವೃಶ್ಚಿಕ
ನಿಮಗೆ ಪೂರಕ ದಿನವಲ್ಲ. ಅಪೇಕ್ಷಿತ ಫಲಿತಾಂಶ ಸಿಗುವುದಿಲ್ಲ. ಆಪ್ತರೊಂದಿಗಿನ  ಭಿನ್ನಮತ  ಸೌಹಾರ್ದ ದಿಂದ ಪರಿಹರಿಸಲು ಒತ್ತು ಕೊಡಿ.

ಧನು
ಕೆಲ ವಿಷಯಗಳಲ್ಲಿ  ಭಾವುಕರಾಗಿ ವರ್ತಿಸದಿರಿ. ಪ್ರಾಕ್ಟಿಕಲ್ ಆಗಿ ಚಿಂತಿಸಿರಿ. ಹಿರಿಯರ ಜತೆ ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ.

ಮಕರ
ಅಭಿವೃದ್ಧಿಗೆ ಈ ದಿನ ಪೂರಕವಾಗಿದೆ. ಕಾರ್ಯದಲ್ಲಿ ಯಶಸ್ಸು. ಆತ್ಮೀಯರ ಜತೆ ಜಗಳ ಸಂಬಂಧ ಸುಧಾರಣೆ. ಆರೋಗ್ಯ ಸಮಸ್ಯೆ ನಿವಾರಣೆ ಆಗಲಿದೆ.

ಕುಂಭ
ನೆಗೆಟಿವ್ ಚಿಂತನೆ ನಿಮ್ಮ ಮನಸ್ಸು ಆವರಿಸಬಹುದು. ಆತ್ಮೀಯ ಸಂಬಂಧ ಕೆಡಲು ಅವಕಾಶ ಕೊಡಬಿಡಿ. ವದಂತಿ ನಂಬಬೇಡಿ.

ಮೀನ
ಕಾರ್ಯ ನಿಮಿತ್ತ ಪ್ರಯಾಣ ಸಂಭವ. ಅದರಲ್ಲಿ ಯಶ ಸಿಗುವುದು. ಮನೆಯಲ್ಲಿನ ಪರಿಸ್ಥಿತಿ ತುಸು ಚಿಂತೆಗೆ ಕಾರಣವಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!