ಹೊಸದಿಗಂತ ವರದಿ ಶಿವಮೊಗ್ಗ :
ಟ್ರಾಫಿಕ್ ಜಾಮ್ ನಿಂದಾಗಿ ಬಸ್ ಗಳು ನಿಂತಲ್ಲೆ ನಿಲ್ಲುವ ಸ್ಥಿತಿಯಿಂದ ಬೇಸತ್ತ ಜನರು ಸುಮಾರು 10 ಕಿಮೀ ದೂರದಲ್ಲಿಯೇ ವಾಹನ ಬಿಟ್ಟು ನಡೆದುಕೊಂಡು ಪ್ರಧಾನಿಮೋದಿ ಸಮಾವೇಶ ಸ್ಥಳಕ್ಕೆ ತೆರಳಿದರು.
ಬಿಸಿಲು ಲೆಕ್ಕಿಸದೆ ಸಮಾವೇಶ ಸ್ಥಳದಲ್ಲಿ ಕಡೆ ಸಾಲುಗಟ್ಟಿ ಜನ ದೌಡಾಯಿಸುತ್ತಿದ್ದಾರೆ. ಮಹಿಳೆಯರು, ಯುವಕರ ದಂಡೇ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದೆ. ಕುಡಿಯುವ ನೀರು,ಟೀ ಗಾಗಿ ಅಂಗಲಾಚುತ್ತಿದ್ದಾರೆ. ಕೆಲವರಂತೂ ಊಟದ ಸ್ಥಳಕ್ಕೆ ಹೋದರೆ ಸಾಕುಎಂದು ಹೊರಟರೆ ಬಹುತೇಕರು ಮೋದಿ ನೋಡಬೇಕೆಂಬ ಹಂಬಲದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.