ಲಾರೆನ್ಸ್‌ ಬಿಷ್ಣೋಯಿಗೆ 7 ದಿನಗಳ ಪೋಲೀಸ್‌ ಕಸ್ಟಡಿ, ಭಾರೀ ಭದ್ರತೆಯ ನಡುವೆ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಂಜಾಬ್‌ ಗಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಸಿಧು ಮೂಸೆವಾಲ ಹತ್ಯೆಗೆ ಸಂಬಂಧಿಸಿದಂತೆ ಗಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು 7 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲವು ಆದೇಶ ನೀಡಿದೆ.

ಇದೊಂದು ಹೈ-ಪ್ರೊಫೈಲ್ ಕೇಸ್‌ ಆಗಿರುವುದರಿಂದ ಭಾರೀ ಭದ್ರತೆಯ ನಡುವೆ ಬಿಷ್ಣೋಯಿಯನ್ನು ಮಾನ್ಸಾದಿಂದ ಮೊಹಾಲಿಗೆ ಸಾಗಿಸಲಾಗುತ್ತಿದೆ. ಆತನನ್ನು ಬುಲೆಟ್‌ ಪ್ರೂಫ್‌ ವಾಹನದಲ್ಲಿ ಸಾಗಿಸಲಾಗುತ್ತಿದ್ದು ಎರಡು ಡಜನ್ ವಾಹನಗಳನ್ನು ಒಳಗೊಂಡ ಬೆಂಗಾವಲು ಪಡೆಯಲ್ಲಿ ಸುಮಾರು 100 ಪೊಲೀಸರು ಆತನಿಗೆ ಬೆಂಗಾವಲು ನೀಡುತ್ತಿದ್ದಾರೆ.

ಪಂಜಾಬ್ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ದರೋಡೆಕೋರರ ವಿರುದ್ಧದ ಕಾರ್ಯಪಡೆ ಮತ್ತು ಇತರ ಏಜೆನ್ಸಿಗಳು ಗಾಯಕ-ರಾಜಕಾರಣಿ ಸಿಧು ಮೂಸ್ ವಾಲಾ ಅವರ ಹತ್ಯೆಯಲ್ಲಿ ಬಿಷ್ಣೋಯ್ ಅವರ ಪಾತ್ರದ ಬಗ್ಗೆ ಮೊಹಾಲಿಯಲ್ಲಿ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ವರದಿ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!